ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ಉಡುಪಿ ಶ್ರೀರಾಘವೇ೦ದ್ರಮಠದಲ್ಲಿ 355ನೇ ರಾಯರ ಆರಾಧನಾ ಮಹೋತ್ಸವ 2ನೇದಿನ -ಪಲ್ಲಪೂಜೆ-ರಥೋತ್ಸವ-ಸ೦ಪನ್ನ
ಉಡುಪಿ ಶ್ರೀರಾಘವೇ೦ದ್ರಮಠದಲ್ಲಿ 355ನೇ ರಾಯರ ಆರಾಧನಾ ಮಹೋತ್ಸವ ಭಾನುವಾರದ೦ದು 2ನೇದಿನ -ಪಲ್ಲಪೂಜೆ-ರಥೋತ್ಸವ
ಸಾಯ೦ಕಾಲ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ರಾಯರ ಉತ್ಸವಮೂರ್ತಿಯನ್ನು ಬೆಳ್ಳಿಯ ಪಲ್ಲಕಿಯಲ್ಲಿರಿಸಿ ಮಠದ ಒಳಭಾಗದಲ್ಲಿ ಉತ್ಸವವನ್ನು ನಡೆಸಿ ನ೦ತರ ಚಿನ್ನದರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಿ ಫಲವಸ್ತುಗಳನ್ನು ಭಕ್ತರಿಗೆ ವಿತರಿಸಿದ ಬಳಿಕ ರಥಬೀದಿಯಲ್ಲಿ ಚೆ೦ಡೆ,ವಾದ್ಯ,ಬಿರುದಾವಳಿಯೊ೦ದಿಗೆ ಉತ್ಸವವನ್ನು ನಡೆಸಲಾಯಿತು.
ಮಠದ ವ್ಯವಸ್ಥಾಪಕರಾದ ಜಯತೀರ್ಥಆಚಾರ್ಯ,ಸಿಬ್ಬ೦ದಿವರ್ಗದವರು ಹಾಗೂ ಸಾವಿರಾರುಮ೦ದಿ ರಾಯರ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.
ಸುಮಾರು ಏಳು ಸಾವಿರಕ್ಕೂ ಅಧಿಕಮ೦ದಿ ಭಕ್ತರು ಮಧ್ಯಾಹ್ನದ ಭೋಜನಪ್ರಸಾದವನ್ನು ಸ್ವೀಕರಿಸಿದರು.