....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಉಡುಪಿಯ ಗು೦ಡಿಬೈಲಿನ ಅಭಿರಾಮಧಾಮದಲ್ಲಿ 3ನೇ ವರ್ಷದ ಜಿಲ್ಲಾಮಟ್ಟದ ರಾಷ್ಟ್ರ – ಭಕ್ತಿ ಉದ್ಧೀಪನಾ ಅಭಿಯಾನ-2026-ಆ.11,12ರ೦ದು ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಉಡುಪಿ : ಭಾರತದ 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಲ್ಲಿನ ಗುಂಡಿಬೈಲಿನ ಅಭಿರಾಮಧಾಮದಲ್ಲಿ 3ನೇವರ್ಷದ ಜಿಲ್ಲಾ ಮಟ್ಟದ ರಾಷ್ಟ್ರ–ಭಕ್ತಿ ಉದ್ಧೀಪನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಸಮಸ್ತ ಶಾಲಾ ಮಕ್ಕಳಲ್ಲಿ ರಾಷ್ಟ್ರ-ಭಕ್ತಿ ಉದ್ಧೀಪನಗೊಳಿಸಲೆಂದೇ ದಿನಾಂಕ 11 ಮತ್ತು 12 ಆಗಸ್ಟ್ 2026ರಂದು ದೇಶ ಭಕ್ತಿಗೀತೆ ಗಾಯನ, ಪ್ರಬಂಧ ಸ್ಫರ್ಧೆ, ಭಾಷಣ/ಚರ್ಚಾ ಸ್ಫರ್ಧೆ, ಐತಿಹಾಸಿಕ ಏಕಪಾತ್ರಾಭಿನಯ ಬೆಳಿಗ್ಗೆ 9.30ರಿಂದ ಸಂಜೆ 5.00ರ ತನಕ ಆಯೋಜಿಸಲಾಗಿದೆ ಎ೦ದು ಅಭಿಯಾನದ ಆಯೋಜಕರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ..
ಪ್ರಾಥಮಿಕ ಶಾಲೆಯ 5, 6, 7ನೇ ತರಗತಿಯ ಮಕ್ಕಳಿಗೆ ಕಿರಿಯರ ವಿಭಾಗದಲ್ಲಿ ರೂ.1,000/-, 700/-, 300/-ರಂತೆಯೂ, ಫ್ರೌಢ ಶಾಲೆಯ 8, 9, 10ನೇ ತರಗತಿಯ ಮಕ್ಕಳಿಗಾಗಿ ಹಿರಿಯರ ವಿಭಾಗದಲ್ಲಿ ರೂ.1,500/-, 1,000/-, 500/-ರಂತೆಯೂ, ಈ ನಾಲ್ಕು ಸ್ಫರ್ಧೆಗಳಲ್ಲಿ ತಲಾ ಮೂರು ಬಹುಮಾನಗಳನ್ನು ವಿದ್ಯಾರ್ಥಿಗಳು ಗೆಲ್ಲಬಹುದಾಗಿದೆ. ಅತೀ ಹೆಚ್ಚು ಬಹುಮಾನ ಗಳಿಸಿದ ಶಾಲೆಗೆ ಸ್ವರ ಸಾಮ್ರಾಟ್ – ವಿದ್ವಾನ್ ಅಭಿರಾಮ ಭರತವಂಶಿ ಜಿಲ್ಲಾ ಮಟ್ಟದ ವಿಶಿಷ್ಟ ದೇಶ-ಭಕ್ತಿ ಪರ್ಯಾಯ ಪ್ರಶಸ್ತಿ ಟ್ರೋಫಿಯನ್ನಿತ್ತು ಸನ್ಮಾನಿಸಲಾಗುತ್ತದೆ.
ಇದಲ್ಲದೇ ಹತ್ತೈವತ್ತು ಮೆಡಲ್ ಗಳೂ, ಪ್ರಶಸ್ತಿ, ಪ್ರಮಾಣ ಪತ್ರಗಳೂ ದೇಶ-ಭಕ್ತ ಮಕ್ಕಳ ಕೈಸೇರಲು ಕಾತರದಿ ಕಾಯುತ್ತಿವೆ ಎಂದು ಅಭಿಯಾನದ ಆಯೋಜಕರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೇ ಮೀಸಲಾದ ಈ ಸ್ಫರ್ಧೆಗಳಲ್ಲಿ ಯಾವುದೇ ಸ್ಫರ್ಧಿಗಳು ವೈಯಕ್ತಿಕವಾಗಿಯೂ / ಶಾಲಾ ತಂಡದಿಂದಲೂ ಭಾಗವಹಿಸಬಹುದು. ಎಲ್ಲಾ ಸ್ಫರ್ಧಿಗಳು ತಮ್ಮ ತಮ್ಮ ಶಾಲೆಯ ಸಮವಸ್ತ್ರ ಧರಿಸಿ, ಶಾಲಾ ಮುಖ್ಯಸ್ಥರ ಸಹಿ/ಸೀಲು ಹಾಕಿರುವ ಗುರುತಿನ ಚೀಟಿಯನ್ನು ಸ್ಫರ್ಧಾ ವೇಳೆಯಲ್ಲಿ ಪ್ರಸ್ತುತ ಪಡಿಸತಕ್ಕದ್ದು. ನೋಂದಾಯಿಸಲು ಕೊನೆಯ ದಿನಾಂಕ 08 ಆಗಸ್ಟ್ 2026. ಪ್ರಬಂಧ ಹಾಗೂ ಭಾಷಣ ಸ್ಫರ್ಧೆಯ ವಿಷಯವನ್ನು ತಿಳಿಯಲು ಶ್ರೀ ಅಭಿರಾಮ ಧಾಮಕ್ಕೆ ಕರೆಮಾಡಿ (7022274686) ತಿಳಿದು ಭಾಗವಹಿಸಿ.