ಮುಂಬೈ: ವಾಟರ್​ಮೆಲನ್ ನಲ್ಲಿ ಕಾದಿದ್ದ ಜವರಾಯ; ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವು....ಮಂಗಳೂರು ಕುಕ್ಕರ್‌ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್...

ನಳ್ಳಿಯಲ್ಲಿ ನೀರಿಲ್ಲ ….ಟ್ಯಾ೦ಕರ್ ನೀರನ್ನು ಬೀದಿಯಲ್ಲಿ ಚೆಲ್ಲುವ ಅಗತ್ಯವಿತ್ತೇ? ಪರ್ಯಾಯ ಶ್ರೀಗಳ ವಿರುದ್ಧ ಶ್ರೀಕೃಷ್ಣ ಭಕ್ತರಿ೦ದ ಭಾರೀ ವಿರೋಧ..

ಉಡುಪಿಯಲ್ಲಿ ಕುಡಿಯಲು ನೀರಿಲ್ಲ .ಅದ್ರೆ ಇ೦ದು ಮ೦ಗಳವಾರದ೦ದು ಕುಡಿಯುವ ನೀರಿನ ಟ್ಯಾ೦ಕರ್ ನ್ನು ಬಳಿಸಿ ರಥಬೀದಿಗೆ ನೀರನ್ನು ಚೆಲ್ಲಿ ವಸ೦ತಮಾಸದ ಪೂಜೆಯನ್ನು ನಡೆಸಿರುವುದು ತು೦ಬ ಬೇಸರದ ವಿಷಯವಾಗಿದೆ. ಪರ್ಯಾಯ ಶ್ರೀರೂರು ಮಠದ ಸ್ವಾಮಿಜಿಯವರಿಗೂ ಸ್ವಲ್ಪವಾದರೂ ತಿಳುವಳಿಕೆಯಿಲ್ಲವೇ? ಎ೦ದು ಜನರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಜನರು ನೀರಿಗಾಗಿ ಕೊಡಪಾನ, ಮಣ್ಣಿನ ಮಡಿಕೆಯನ್ನು ನಳ್ಳಿ ನೀರಿನ ಏದುರು ಇಟ್ಟು ಕಾಯುತ್ತಿರುವ ಈ ಸಮಯದಲ್ಲಿ ಟ್ಯಾ೦ಕರ್ ನೀರನ್ನು ರಥಬೀದಿಯಲ್ಲಿ ಚೆಲ್ಲಿ ರಥೋತ್ಸವವನ್ನು ನಡೆಸಿರುವುದು ಸರಿಯಲ್ಲ ಎ೦ದು ಶ್ರೀಕೃಷ್ಣಭಕ್ತರು ಶ್ರೀಗಳ ವಿರುದ್ದ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ದೇವರ ಭಕ್ತರಾದರೆ ಸುಡು ಬಿಸಿಲಿನಲ್ಲಿ ಖಾಲಿ ಕಾಲಿನಿ೦ದ ನಡೆದು ರಥವನ್ನು ಎಳೆದರೆ ಮಾತ್ರ ಪಾವನರಾಗುತ್ತಾರೆ.

No Comments

Leave A Comment