ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಕೋ – ಆಪರೇಟಿವ್ ಟೌನ್ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಚ್. ಜಯಪ್ರಕಾಶ್ ಕೆದ್ಲಾಯರಿಗೆ ಭರ್ಜರಿ ಗೆಲುವು

ಉಡುಪಿ:ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಎಚ್.ಜಯಪ್ರಕಾಶ್ ಕೆದ್ಲಾಯರ ತಂಡದ ಸದಸ್ಯರಾದ ಪ್ರಹ್ಲಾದ್ ಬಲ್ಲಾಳ್ ಎನ್ˌ ಭಾಸ್ಕರ ರಾವ್ ಕಿದಿಯೂರುˌ ಮುರಳೀಧರ ಭಟ್ ಕೆ, ರವೀಂದ್ರ ಪಿ.ಎನ್ˌ ಪಿ. ರಾಘವೇಂದ್ರ ಭಟ್ ˌ ಪಿ. ಶ್ರೀಪತಿ ರಾವ್ˌ ಸೀತಾರಾಮ ಕೇಕುಡˌ ಸೂರ್ಯಪ್ರಕಾಶ್ ರಾವ್ ಎನ್ˌ ಹಾಗೂ ಮಹಿಳಾ ಪ್ರಾತಿನಿಧ್ಯದಲ್ಲಿ ಮನೋರಮಾ ಎಸ್. ಹಾಗೂ ರೂಪ ಮೋಹನ್ ಭಾರಿ ಅಂತರದಿಂದ ಗೆಲುವು ಸಾಧಿಸಿರುತ್ತಾರೆ.

ಬ್ಯಾಂಕಿನ ಚುನಾವಣೆಯನ್ನು ನಡೆಸಿಕೊಟ್ಟ ಸಹಕಾರ ಸಂಘಗಳ ಉಪ ನಿಪಂಧಕರು ರಿರ್ಟನಿಂಗ್ ಅಧಿಕಾರಿ ಲಾವಣ್ಯ .ಕೆ.ಆರ್ˌ ಇವರು ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಮತದಾನ ಚಲಾಯಿಸಿದ ಬ್ಯಾಂಕಿನ ಎಲ್ಲಾ ಮತದಾರ ಸದಸ್ಯರಿಗೆ ಜಯಪ್ರಕಾಶ್ ಕೆದ್ಲಾಯರು ಕ್ರತಜ್ಞತೆ ಸಲ್ಲಿಸಿದರು.

kiniudupi@rediffmail.com

No Comments

Leave A Comment