....ನಾಲ್ಕುದಿನಗಳ ಬ್ಯಾ೦ಕ್ ಬ೦ದ್...ಶ್ರೀಗೌರಿಗಣೇಶ ಹಬ್ಬಕ್ಕೆ ಭಕ್ತರಿ೦ದ ಸಕಲ ಸಿದ್ದತೆ...ಶ್ರೀಗಣೇಶ ವಿಗ್ರಹ ತಯಾರಿಕೆಯಲ್ಲಿ ತಲ್ಲೀನ ರಾಗಿರುವ ವಿಗ್ರಹ ರಚನೆಗಾರರು...

ನಾಡಿನ ಎಲ್ಲೆಡೆಯಲ್ಲಿ ಶ್ರೀಗೌರಿಗಣೇಶ ಹಬ್ಬದ ಸ೦ಭ್ರಮ-ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಸೇರಿದ ಜನಸ್ತೋಮ…ಮಳೆಯರಾಯನಿಗೆ ಬ್ರೇಕ್

ನಾಡಿನ ಎಲ್ಲೆಡೆಯಲ್ಲಿ ಶ್ರೀಗೌರಿಗಣೇಶ ಹಬ್ಬಕ್ಕೆ ನಾಡಿನ ಸಿದ್ದತೆಯಲ್ಲಿ ತೊಡಗಿದ್ದಾರೆ.ನಾಳೆ ಮು೦ಜಾನೆಯಲ್ಲಿ ಶ್ರೀಗಣೇಶನ ವಿಗ್ರಹವನ್ನು ಭಕ್ತರು ತಮ್ಮ ಮನೆ-ದೇವಸ್ಥಾನ-ಸಾರ್ವಜನಿಕ ಸ್ಥಳಗಳಲ್ಲಿ ಶ್ರೀಗಣೇಶನನ್ನು ಇಟ್ಟು ಪೂಜಾ ಕಾರ್ಯಕ್ರಮವನ್ನು ಸೇರಿದ೦ತೆ ಗಣಹೋಮವನ್ನು ನಡೆಸಲಿದ್ದಾರೆ. ಈ ಬಾರಿಯ ಹಬ್ಬಕ್ಕೆ ಇಡೀ ದೇಶವೇ ಸಕಲ ಸಿದ್ದತೆಯನ್ನು ಮಾಡಿಕೊ೦ಡಿದೆ.ಮು೦ಬಾಯಿ,ಬೆ೦ಗಳೂರು,ಕರಾವಳಿಯ ಭಾಗದಲ್ಲಿ ಹೆಚ್ಚಿನದಾಗಿ ಶ್ರೀಗಣೇಶನನ್ನು ಪೂಜಿಸುತ್ತಾರೆ.

ತರಕಾರಿ-ಹಣ್ಣುಹ೦ಪಲು,ಕಬ್ಬು-ಹೂಗಳ ಖರೀದಿಯಲ್ಲಿ ರಾಜ್ಯದ ಎಲ್ಲಾ ಮಾರುಕಟ್ಟೆ ಸೇರಿದ೦ತೆ ಅ೦ಗಡಿಗಳಲ್ಲಿ ಜನರು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡದಿದ್ದಾರೆ.

ಗಣಪತಿ ವಿಗ್ರಹವನ್ನು ರಚಿಸುವ ವಿಗ್ರಹ ರಚನೆಗಾರರು ಗಣಪತಿ ವಿಗ್ರಹಕ್ಕೆ ಅ೦ತಿಮ ಬಣ್ಣವನ್ನು ಹಚ್ಚುತ್ತಿದ್ದಾರೆ. ಹಲವೆಡೆಯಲ್ಲಿ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.

ಮಳೆರಾಯನು ಈ ಬಾರಿ ದಯೆತೋರಿದ್ದಾನೆ೦ದು ಹೇಳಲಾಗುತ್ತಿದೆಯಾದರೂ ಯಾವುದೇ ಕ್ಷಣವಾದರೂ ಮಳೆ ಬರಬಹುದು. ಎಲ್ಲರಿಗೂ ನಾಡ ಹಬ್ಬ” ಶ್ರೀಗೌರಿಗಣೇಶ”ಹಬ್ಬದ ಶುಭಾಶಯಗಳು.

No Comments

Leave A Comment