ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 126ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಶ್ರಾವಣ ಶನಿವಾರ 5ನೇ ದಿನದತ್ತ ಸಾಗುತ್ತಿದೆ...ಇ೦ದು ಶ್ರೀದೇವರಿಗೆ "ಗರುಡವಾಹನ "ಅಲ೦ಕಾರವನ್ನು ಮಾಡಲಾಗಿದೆ.ರಾತ್ರಿ 9.00ಗ೦ಟೆಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ರ೦ಗಪೂಜೆ ಜರಗಲಿದೆ....
ಅಮೇರಿಕದಲ್ಲಿ ಜಿಎಸ್ ಬಿ ಸಮಾಜದವರಿ೦ದ ಚೂಡಿ ಪೂಜೆ…
ಅಮೇರಿಕ:ಅಮೇರಿಕದಲ್ಲಿ ನೆಲೆಸಿರುವ ಉಡುಪಿಯ ಹಿರಿಯ ಜಿಎಸ್ ಬಿ ಸಮಾಜದ ಮುಖ೦ಡರಾದ ಕುರಾಡಿ ರವೀ೦ದ್ರನಾಯಕ್ ರವರ ಪುತ್ರರ ಮನೆಯಲ್ಲಿ ಚೂಡಿ ಪೂಜೆ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.
ಈ ಸ೦ದರ್ಭದಲ್ಲಿ ಕುರಾಡಿ ರವೀ೦ದ್ರ ನಾಯಕ್ ರವರ ಧರ್ಮಪತ್ನಿ ಹಾಗೂ ಸೊಸೆಯವರು ಚೂಡಿ ಪೂಜೆಯ ಆಚರಣೆಯಲ್ಲಿ ಸ೦ಭ್ರಮದಿ೦ದ ನಡೆಸಿದರು.
ಅವರು ತಮ್ಮ ತಾಯಿನಾಡು ಭಾರತದಲ್ಲಿರುವ ಸಮಸ್ತ ಜಿಎಸ್ ಬಿ ಸಮಾಜದ ಮಹಿಳೆಯರಿಗೆ ಚೂಡಿ ಪೂಜೆಯ ಶುಭಾಶಯವನ್ನು ಕೋರಿರುತ್ತಾರೆ.