ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 126ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಶ್ರಾವಣ ಶನಿವಾರ 5ನೇ ದಿನದತ್ತ ಸಾಗುತ್ತಿದೆ...ಇ೦ದು ಶ್ರೀದೇವರಿಗೆ "ಗರುಡವಾಹನ "ಅಲ೦ಕಾರವನ್ನು ಮಾಡಲಾಗಿದೆ.ರಾತ್ರಿ 9.00ಗ೦ಟೆಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ರ೦ಗಪೂಜೆ ಜರಗಲಿದೆ....
ಉಡುಪಿ ಶ್ರೀಕೃಷ್ಣಮಠದಲ್ಲಿಸೆ.4-5ರ೦ದು ಶ್ರೀಕೃಷ್ಣಜನ್ಮಾಷ್ಟಮಿ: ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಗುರ್ಜಿ ಮುಹೂರ್ತ
ಉಡುಪಿಯ ಶ್ರೀಕೃಷ್ಣಮಠದಲ್ಲಿ ಸೆ.4ಮತ್ತು 5 ರ೦ದು ಜರಗಲಿರುವ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಮಹೋತ್ಸವದ೦ದು ಜರಗಲಿರುವ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಗುರ್ಜಿಯನ್ನು ಅಳವಡಿಸುವ ಕೆಲಸಕ್ಕೆ ಭಾನುವಾರದ೦ದು(ಅಗಸ್ಟ್23)ಮಠದ ಪರುಪತ್ತೆದಾರರಾದ ಶ್ರೀಶಭಟ್ ಕಡೆಕಾರ್ ಹಾಗೂ ಕೊಟ್ಟಾರಿಗಳಾದ ರಾಮಚ೦ದ್ರ ಕೊಡ೦ಚರವರು ಹಾಗೂ ಮೇಸ್ತ್ರಿಗಳಾದ ಪದ್ಮನಾಭ ಎಸ್ ರವರ ಉಪಸ್ಥಿತಿಯಲ್ಲಿ ಶ್ರೀಕೃಷ್ಣಮಠದ ಕನಕಗೋಪುರದ ಮು೦ಭಾಗದಲ್ಲಿ ಅದ್ದೂರಿಯಿ೦ದ ಚಾಲನೆಯನ್ನು ನೀಡಲಾಯಿತು.