....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಕ್ರೈಸ್ತ ಧರ್ಮ ಗುರುಗಳ ದಿನಾಚರಣೆ: ಪಾಲ್ದನೆ ಚರ್ಚ್ ನಲ್ಲಿ ಮೂವರು ಧರ್ಮಗುರುಗಳಿಗೆ ಸನ್ಮಾನ

ಮಂಗಳೂರು: ಕೆಥೊಲಿಕರ ಚರ್ಚ್ ಧರ್ಮಗುರುಗಳ ಪೋಷಕ ಸಂತ ಜಾನ್ ಮೇರಿ ವಿಯಾನ್ನಿ ಅವರ ಸ್ಮರಣಾರ್ಥ ಆ.4 ನ್ನು ಧರ್ಮಗುರುಗಳ ದಿನವಾಗಿ ಆಚರಿಸಲಾಗುತ್ತದೆ. ಆ ಪ್ರಯುಕ್ತ ಆ.9ರಂದು ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಬಲಿ ಪೂಜೆಯ ಸಂದರ್ಭ ಪ್ರಧಾನ ಧರ್ಮಗುರು ಸೇರಿದಂತೆ ಮೂವರು ಧರ್ಮಗುರುಗಳನ್ನು ಸನ್ಮಾನಿಸಲಾಯಿತು.

ಪ್ರಧಾನ ಧರ್ಮ ಗುರು ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅವರನ್ನು ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಸಹಾಯಕ ಧರ್ಮಗುರು ಫಾ.ಜೋಸೆಫ್ ಕುವೆಲ್ಲೊ ಅವರನ್ನು ಚರ್ಚ್ ನ ಕಾರ್ಯದರ್ಶ ರೋಷನ್ ಮೊಂತೇರೊ, ಚರ್ಚ್ ನಲ್ಲಿ ಡಿಯಾಕೋನ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಧರ್ಮಗುರುಗಳಾಗಿ ದೀಕ್ಷೆ ಸ್ವೀಕರಿಸಿ ಇಂದು ಪಾಲ್ದನೆಗೆ ಅತಿಥಿಯಾಗಿ ಆಗಮಿಸಿ ಬಲಿ ಪೂಜೆಯಲ್ಲಿ ಸಹಭಾಗಿತ್ವ ವಹಿಸಿದ್ದ ಫಾ. ರೋಶ್ವಿನ್ ಲೋಪೆಜ್ ಅವರನ್ನು ಚರ್ಚ್ ನ ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ ಅವರು ಹೂ ಗುಚ್ಛ ನೀಡಿ ಅಭಿನಂದಿಸಿದರು.

No Comments

Leave A Comment