.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
1ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಸಂದ್ಯಾವಂದನೆ ಶಿಬಿರ
ಉಡುಪಿ: ಉಡುಪಿ ಒಳಕಾಡಿನ ಅನಂತವೈದಿಕ ಕೇಂದ್ರದಲ್ಲಿ ವೇದ ಮೂರ್ತಿ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಇತ್ತೀಚಿಗೆ ಒಂದು ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಸಂದ್ಯಾವಂದನೆ ಶಿಬಿರ ಉಚಿತವಾಗಿ ಆಯೋಜಿಸಿ ನೂತನ ವಟುಗಳಿಗೆ ಮಂತ್ರ ಪಠ , ದೇವತಾ ಪೂಜಾ ವಿಧಿ ವಿಧಾನಗಳನ್ನು ಮನದಟ್ಟು ವಾಗುವಂತೆ ತಿಳಿಸಿದರು.
ಇಂತಹ ಶಿಬಿರಗಳಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಬೌಧಿಕ ಬೆಳವಣಿಗೆಗೆ ಪೂರ್ವಕ ವಾಗಿದ್ದು ಮೇ ತಿಂಗಳಲ್ಲಿ ಪುನಃ ಸಂದ್ಯಾವಂದನೆ ಶಿಬಿರ ಆಯೋಜಿಸಲಾಗುವುದು ತಿಳಿಸಿದರು.