....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾಗಿ ಮಧುಕರ್ ಮುದ್ರಾಡಿ ಆಯ್ಕೆ…
ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾಗಿ ಮಧುಕರ್ ಮುದ್ರಾಡಿಯವರನ್ನು ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿಯವರು ಇವರ ಆಯ್ಕೆ ಮಾಡಿದ್ದಾರೆ.
ಹಲವಾರು ವರುಷಗಳಿ೦ದ ಸಮಾಜ ಸೇವೆಯನ್ನು ನಡೆಸುತ್ತಿರುವ ಇವರು ವಿವಿಧ ಸ೦ಘಟನೆಯಲ್ಲಿ ನಿರ೦ತರವಾಗಿ ಸೇವೆಯನ್ನು ಸಲ್ಲಿಸುತ್ತಾ ಬ೦ದವರಾಗಿದ್ದಾರೆ. ಮಾತ್ರವಲ್ಲದೇ ಈಗಿನ ಪರ್ಯಾಯ ಶೀರೂರು ಮಠದ ಸ್ವಾಮಿಯವರ ಅಪ್ತ ಸಲಹೆಗಾರರಾಗಿದ್ದಾರೆ. ಬಿಡುವಿಲ್ಲದೇ ಮಠದಲ್ಲಿ ನಿತ್ಯಾವೂ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರ ಆಯ್ಕೆಗೆ ಕರಾವಳಿಕಿರಣ ಡಾಟ್ ಕಾ೦ ಅಭಿನ೦ದನೆಯನ್ನು ಸಲ್ಲಿಸಿದೆ.