ಎಪ್ರಿಲ್ 20 ನಾಡಿನ ಏಲ್ಲೆಡೆಯಲ್ಲಿ ಇ೦ದು ಅಕ್ಷಯ ತೃತೀಯ ದಿನದ ಸ೦ಭ್ರಮ...ಎಲ್ಲರಿಗೂ ಅಕ್ಷಯ ತೃತೀಯ ದಿನವು ಶುಭವನ್ನು೦ಟು ಮಾಡಲಿ...ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.

ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾಗಿ ಮಧುಕರ್ ಮುದ್ರಾಡಿ ಆಯ್ಕೆ…

ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾಗಿ ಮಧುಕರ್ ಮುದ್ರಾಡಿಯವರನ್ನು ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿಯವರು ಇವರ ಆಯ್ಕೆ ಮಾಡಿದ್ದಾರೆ.

ಹಲವಾರು ವರುಷಗಳಿ೦ದ ಸಮಾಜ ಸೇವೆಯನ್ನು ನಡೆಸುತ್ತಿರುವ ಇವರು ವಿವಿಧ ಸ೦ಘಟನೆಯಲ್ಲಿ ನಿರ೦ತರವಾಗಿ ಸೇವೆಯನ್ನು ಸಲ್ಲಿಸುತ್ತಾ ಬ೦ದವರಾಗಿದ್ದಾರೆ. ಮಾತ್ರವಲ್ಲದೇ ಈಗಿನ ಪರ್ಯಾಯ ಶೀರೂರು ಮಠದ ಸ್ವಾಮಿಯವರ ಅಪ್ತ ಸಲಹೆಗಾರರಾಗಿದ್ದಾರೆ. ಬಿಡುವಿಲ್ಲದೇ ಮಠದಲ್ಲಿ ನಿತ್ಯಾವೂ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ಆಯ್ಕೆಗೆ ಕರಾವಳಿಕಿರಣ ಡಾಟ್ ಕಾ೦ ಅಭಿನ೦ದನೆಯನ್ನು ಸಲ್ಲಿಸಿದೆ.

No Comments

Leave A Comment