Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!...ಇರಾನ್ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ...
ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ ನೀವು ಬಾಯಿ ಬರದ ಮೂಖರೆ? ಸುರೇಶ್ ಶೆಟ್ಟಿ ಬನ್ನಂಜೆ ಸವಾಲು…
ಉಡುಪಿ:ರಾಜ್ಯದ ಬಿಜೆಪಿ ನಾಯಕರುಗಳು ನಮ್ಮ ರಾಜ್ಯದ ಜನಸಾಮಾನ್ಯರಿಗೆ ಕಾಂಗ್ರೆಸ್ ಪಕ್ಷದ ನೀಡುತ್ತಿರುವ ಗ್ಯಾರೆಂಟಿಯ ವಿರುದ್ಧ ದಿನನಿತ್ಯ ಯಾವುದಾದರೂ ಒಂದು ಹೇಳಿಕೆಯನ್ನು ನೀಡಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಈ ಬಿಜೆಪಿಯು ಯಾವತ್ತೂ ಈ ಗ್ಯಾರಂಟಿ ಯೋಜನೆಯ ವಿರೋಧಿಗಳು ಎಂಬುದು ಸಾಬೀತುಪಡಿಸಿದ್ದಾರೆ.
ಇದೀಗ ಅಮೆರಿಕದ ಕೈ ಗೊಂಬೆಯಾಗಿ ಕೇಂದ್ರ ಸರಕಾರ ನಡೆದುಕೊಂಡಿದ್ದು ನಮ್ಮ ದೇಶದ 150 ಕೋಟಿ ಜನಸಾಮಾನ್ಯರ ದೌರ್ಭಾಗ್ಯ. ಕೇಂದ್ರದ ಈ ಬಿಜೆಪಿ ಸರಕಾರದ ನಡೆಯಿಂದಾಗಿ ಜನಸಾಮಾನ್ಯರು ಬೆಲೆ ಏರಿಕೆಯಲ್ಲಿ ಬಾಳಬೇಕಾದಂತ ಪರಿಸ್ಥಿತಿ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿಯ ಆಡಳಿತವೇ ಕಾರಣ.ಜನಸಾಮಾನ್ಯರು ಬಳಸುವಂತಹ ಗ್ರಹ ಬಳಕೆಯ ಅನಿಲದ ಬೆಲೆಯನ್ನು ಏರಿಸಿ ಜನಸಾಮಾನ್ಯರಿಗೆ ದ್ರೋಹ ಮಾಡುತ್ತಿರುವ ಈ ಮೋದಿ ಸರಕಾರದ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಮೂಕ ಪ್ರೇಕ್ಷಕರಂತೆ ಬಾಯಿ ಮುಚ್ಚಿಕೊಂಡು ಕುಳಿತಿರುವುದನ್ನು ನೋಡಿದರೆ ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಎಂಬುದು ತೋರುತ್ತಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನು ತೆಗೆದು ಜನರಿಗೆ ಮೋಸ ಮಾಡಿದ ಮೋದಿ ಸರ್ಕಾರ.ಇದೀಗ ನಿರಂತರವಾಗಿ ಬೆಲೆ ಏರಿಕೆಯನ್ನು ಮಾಡಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ.ನಮ್ಮ ದೇಶದ ಜನಸಾಮಾನ್ಯರು ಸಂತೋಷದಿಂದ ಬಾಳಿ ಬದುಕಬೇಕಾದರೆ ಈ ಮೋದಿ ಸರ್ಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು . ನಾವು ಭಾರತೀಯರು ಅಮೆರಿಕದ ಕೈ ಗೊಂಬೆಗಳು ಅಲ್ಲ ಎಂಬುದನ್ನು ಎಲ್ಲಾ ಬಿಜೆಪಿ ನಾಯಕರು ಅರಿತುಕೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.