ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...
ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಸ೦ಪನ್ನ…
ಉಡುಪಿ:ಫೆ.24:ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದ್ಮನಾಭ ದೇವಸ್ಥಾನದಲ್ಲಿ ಫೆ. 24ರ ಮ೦ಗಳವಾರದ೦ದು ಶ್ರೀಮನ್ಮಹಾರಥೋತ್ಸವವು ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಅದ್ದೂರಿಯಿ೦ದ ಜರಗಿತು. ಫೆ. 21ರಿಂದ 26ರ ತನಕ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿದೆ.
ಫೆ. 21ರ ಸಂಜೆ ಅಂಕುರಾರೋಹಣ, ಫೆ. 22ರ ಬೆಳಗ್ಗೆ ಕಲಶಾಭಿಷೇಕ, ಧ್ವಜಾರೋಹಣ, ಸಂಜೆ 5.30ಕ್ಕೆ ಹೊರೆಕಾಣಿಕೆ ಮೆರವಣಿಗೆ, 7ರಿಂದ ಬಲಿ, ಮಹಾರಂಗಪೂಜೆ, ಫೆ. 23ರ ಬೆಳಗ್ಗೆ 7ರಿಂದ ಪ್ರಧಾನ ಯಾಗ, ಸಂಜೆ ಕಟ್ಟೆಪೂಜೆ, ಫೆ. 24ರ ಬೆಳಗ್ಗೆ ಕಲಶಾಭಿಷೇಕ, 11ರಿಂದ ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ರಥಾರೋಹಣ, ಮಧ್ಯಾಹ್ನ 12ರಿಂದ ಶ್ರೀಮನ್ಮಹಾರಥೋತ್ಸವ ಅನಂತರ ಅನ್ನಸಂತರ್ಪಣೆ ಜರಗಿತು.