.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಶೀರೂರು ಮಠದ ಪರ್ಯಾಯ: ರಥಬೀದಿಯ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ 24ಗ೦ಟೆ ಉಚಿತ ತುರ್ತು ಚಿಕಿತ್ಸೆಗೆ ಚಾಲನೆ

ಶೀರೂರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ರಥಬೀದಿಯ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ ನಿರಂತರ 24 ತಾಸುಗಳ ಉಚಿತ ತುರ್ತು ಚಿಕಿತ್ಸಾ ಶಿಬಿರವನ್ನು ಸ್ವಾಗತ ಸಮಿತಿ, ವೈದ್ಯ ವೃಂದ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯ, ಸ್ಥಳೀಯ ವೈದ್ಯರು ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು.

ಶಿಬಿರವನ್ನು ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಚಾಲನೆಯನ್ನುನೀಡಿ ಶುಭಹಾರೈಸಿದರು. ಚಿಕಿತ್ಸಾಲಯದ ವೈದ್ಯರಾದ ಡಾ. ಸತೀಶ್ ರಾವ್, ಡಾ. ಜಯಂತ್ ,ಕೆ.ಆರ್ ಕೆ ಭಟ್ ,ಶಿವಾನ೦ದ ಭ೦ಡಾರ್ಕರ್ ಡಾ.ಅರ್ಚನಾ ರಾವ್ ಚಿಕಿತ್ಸಾಲಯ ಸಿಬ್ಬ೦ದಿ ವರ್ಗದವರು ಹಾಗೂ ತುರ್ತು ಚಿಕಿತ್ಸಾ ವಾಹನದ ವೈದ್ಯರಾದ ಡಾ. ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು.

 

No Comments

Leave A Comment