.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಪರ್ಯಾಯ ಹೊರೆ ಕಾಣಿಕೆ ವಿಚಾರದಲ್ಲಿ ಉಡುಪಿ ಶಾಸಕರಿಂದ ಗೊಂದಲ ಸೃಷ್ಟಿ: ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಅನಗತ್ಯವಾಗಿ ನಮ್ಮ ಉಡುಪಿಯ ಶಾಸಕರು ಮುಸ್ಲಿಂ ಸೌಹಾರ್ದ ಸಮಿತಿಯವರು ಪರ್ಯಾಯ ಮಹೋತ್ಸವಕ್ಕೆ ನೀಡುತ್ತಿರುವ ಹೊರೆ ಕಾಣಿಕೆಯ ಅವಶ್ಯಕತೆ ಇಲ್ಲ ಎಂಬುದನ್ನ ತಮ್ಮ ಪತ್ರಿಕೆ ಹೇಳಿಕೆ ಮೂಲಕ ನೀಡಿರುತ್ತಾರೆ.

ಆದರೆ ಶಾಸಕರು ಉಡುಪಿಯ ಪರ್ಯಾಯ ಮಠಾಧೀಶರೇ ಅಥವಾ ಮಠದ ದೀವಾನರೆ ಎಂಬುದನ್ನು ಸ್ಪಷ್ಟಪಡಿಸಬೇಕು ಈ ಬಗ್ಗೆ ಮಠಾಧೀಶರಾಗಲಿ ಮಠಕ್ಕೆ ಸಂಬಂಧಪಟ್ಟ ದಿವಾನರಾಗಲಿ ಯಾವುದೇ ಹೇಳಿಕೆಯನ್ನು ನೀಡದೆ ಇರುವಾಗ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ನಮ್ಮ ಉಡುಪಿಯ ಶಾಸಕರು ತಾನು ಉಡುಪಿಯ ಜನಪ್ರತಿನಿಧಿ ಎಂಬುದನ್ನು ಮರೆತಿದ್ದಾರೆಯೇ. ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ಅನಗತ್ಯವಾಗಿ ಉಡುಪಿಯಲ್ಲಿ ಗೊಂದಲವನ್ನು ಸೃಷ್ಟಿಸುವ ನಿಮ್ಮ ಈ ಪ್ರಯತ್ನವನ್ನು ಕೈ ಬಿಟ್ಟು ಸೌಹಾರ್ದತೆಯಿಂದ ಎಲ್ಲರೂ ಒಂದಾಗಿ ಉಡುಪಿಯ ಪರ್ಯಾಯ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸೋಣ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಉಡುಪಿಯ ನಗರಸಭೆ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

No Comments

Leave A Comment