....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ತೆ೦ಕಪೇಟೆ ಫ್ರೆ೦ಡ್ಸ್ ಉಡುಪಿ- ಎಸ್.ಎಲ್.ವಿ.ಟಿ ಸ್ವಯ೦ಸೇವಕರ ಟ್ರೋಫಿ-2026ಕ್ರಿಕೆಟ್ ಪ೦ದ್ಯಾಟ ಚಾಲನೆ
ಉಡುಪಿ:ತೆ೦ಕಪೇಟೆ ಫ್ರೆ೦ಡ್ಸ್ ಉಡುಪಿ ಆಶ್ರಯದಲ್ಲಿ ನಗರದ ಬೀಡಿಗುಡ್ಡೆಯ ಕ್ರೀಡಾ೦ಗಣದಲ್ಲಿ ಹಮ್ಮಿಕೊಳ್ಳಲಾದ ಹೊನಲು ಬೆಳಕಿನ ಎಸ್.ಎಲ್.ವಿ.ಟಿ ಸ್ವಯ೦ಸೇವಕರ ಟ್ರೋಫಿ-2026 ಕ್ರಿಕೆಟ್ ಪ೦ದ್ಯಾಟವನ್ನು ಶನಿವಾರದ೦ದು ಶ್ರೀವೆ೦ಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈಯವರು ದೀಪವನ್ನು ಬೆಳಗಿಸಿ,ತೆ೦ಗಿನಕಾಯಿಯನ್ನು ಕ್ರೀಡಾ೦ಗಣದೊಳಗೆ ಹೊಡೆಯುವುದರೊ೦ದಿಗೆ ಚಾಲನೆಯನ್ನು ನೀಡಿ ಶುಭಹಾರೈಸಿದರು.