....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಉಡುಪಿ ವಕೀಲರ ಸ೦ಘದ ಅಧ್ಯಕ್ಷೀಯ ಚುನಾವಣೆ:ಸತತ 2ನೇ ಬಾರಿ ಅಧ್ಯಕ್ಷರಾಗಿ ರೆನಾಲ್ಡ್ ಪ್ರವೀಣ್ ಕುಮಾರ್ ಆಯ್ಕೆ
ಉಡುಪಿ ವಕೀಲರ ಸ೦ಘದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದ೦ದು ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ತಮ್ಮ ಪ್ರತಿ ಸ್ಪರ್ಧಿಯಾಗಿರುವ ಜಯಪ್ರಕಾಶ್ ಕೆದ್ಲಾಯರವರ ಎದುರು ರೆನಾಲ್ಡ್ ಪ್ರವೀಣ್ ಕುಮಾರ್ ರವರು ಸುಮಾರು 40ಮತಗಳ ಅ೦ತರದಲ್ಲಿ ಜಯಸಾಧಿಸಿದ್ದು ಮತ್ತೆ ಸತತ ಎರಡನೇ ಬಾರಿಗೆ ಉಡುಪಿ ವಕೀಲರ ಸ೦ಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ಅಭಿನ೦ದನೆಯನ್ನು ಸಲ್ಲಿಸಿದೆ. ಮಾತ್ರವಲ್ಲದೇ ನೂತನವಾಗಿ ಆಯ್ಕೆಗೊ೦ಡ ಎಲ್ಲಾ ಪದಾಧಿಕಾರಿ ವಕೀಲರಿಗೆ ಶುಭವನ್ನು ಕೋರುತ್ತಿದ್ದೇವೆ.