ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಬೆಂಗಳೂರು 7 ಕೋಟಿ ರೂ ದರೋಡೆ​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಕರಣದ ಕಿಂಗ್​ಪಿನ್​ ಪತ್ನಿ

ಬೆಂಗಳೂರು, ನವೆಂಬರ್​ 21: ನಗರದಲ್ಲಿ ನಡೆದಿರುವ 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 5.30 ಕೋಟಿ ರೂ. ಹಣವನ್ನು ಆಂಧ್ರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಕೇಸ್​​ನ ಕಿಂಗ್​ಪಿನ್ ​ ರವಿ ಪತ್ನಿಯನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಕಿಂಗ್​ಪಿನ್​ ರವಿ ಪತ್ನಿ ಪೊಲೀಸರ ವಶಕ್ಕೆ

ಪ್ರಕರಣದ ಕಿಂಗ್​ಪಿನ್​ ರವಿ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ರವಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಪತಿ ಕೃತ್ಯದಲ್ಲಿ ಭಾಗಿಯಾಗಿರೋದನ್ನು ರವಿ ಪತ್ನಿ ಒಪ್ಪಿಕೊಂಡಿದ್ದಾರೆ. ನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ, ನೀವೇ ಬಂದ್ರಿ ಎಂದು ಪೊಲೀಸರ ಜೊತೆಗೆ ಬಂದಿದ್ದಾರೆ.

ಪೋಲಿಸಪ್ಪನ ಬಂಧನ: 5.30ಕೋಟಿ ರೂ. ರಿಕವರಿ, ಉಳಿದಿದ್ದೇನಾಯ್ತು?

ಈ ಇಡೀ ಗ್ಯಾಂಗ್​ನ ಮಾಸ್ಟರ್ ಮೈಂಡ್ ಬೇರೆ ಯಾರೋ ಅಲ್ಲ. ಆರಕ್ಷಕರಲ್ಲೇ ಒಬ್ಬ. ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್ ಅಣ್ಣಪ್ಪ. ಅಣ್ಣಪ್ಪ ಮತ್ತವನ ಸ್ನೇಹಿತ ಸಿಎಂಎಸ್​ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ನೌಕರ ಕ್ಸೇವಿಯರ್ 7 ಕೋಟಿ ರೂ ಲೂಟಿಯ ಸೂತ್ರದಾರರು.

ರಾಬರಿ ಪ್ಲ್ಯಾನ್​​ ನಿಂದು, ಎಸ್ಕೇಪ್ ಪ್ಲ್ಯಾನ್ ನಂದು ಅಂತ ದರೋಡೆ ಮಾಡಿಸ್ದೋರ ಪ್ಲ್ಯಾನಿಂಗ್ ಕೈಕೊಟ್ಟಿತ್ತು. ಸದ್ಯ ಇಬ್ಬರನ್ನೂ ಪೊಲೀಸರು ಎತ್ತಾಕ್ಕೊಂಡು ಬಂದಿದ್ದು, ಒಟ್ಟು 5 ಕೋಟಿ 30 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.

No Comments

Leave A Comment