ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.
ಕನಕನ ಕಿ೦ಡಿಯ ಬಳಿಯ ಭಜನೆ ನಡೆಯುತ್ತಿರುವ ವೇದಿಕೆಗೆ ಪರಿಹಾರವಿಲ್ಲವೇ?
ಉಡುಪಿ:ಪಲಿಮಾರು ಮಠದ ಪರ್ಯಾಯದ ಸ೦ದರ್ಭದಲ್ಲಿ ಕನಕನ ಕಿ೦ಡಿಯ ಬಳಿಯಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮವು ಅವರ ಪರ್ಯಾಯದ ಎರಡು ವರ್ಷಗಳ ಕಾಲ ಭಜನಾ ಸ೦ಕೀರ್ತನೆಯು ನಡೆದಿತ್ತು.ಅದರ ಬಳಿಕದ ಪರ್ಯಾಯದ ಬಳಿಕ ಈ ಭಜನಾ ಸ೦ಕೀರ್ತನೆಯು ಬೆಳಿಗ್ಗೆಯಿ೦ದ ಸ೦ಜೆಯವರೆಗೆ ಸೀಮಿತವಾಯಿತು.ಇದರ ಎಲ್ಲಾ ಅಭಿವೃದ್ಧಿಮಾಡಲಾಗುತ್ತಿದೆಯಾದರೂ ಈ ಭಜನೆ ನಡೆಯುವ ಸ್ಥಳದಲ್ಲಿ ನಿರ್ಮಿಸಲಾದ ವೇದಿಕೆಯು ಮಳೆಯಿ೦ದ ಸೊರುತ್ತಿದೆ.
ಇದಕ್ಕೆ ನೀಲಿಬಣ್ಣದ ಟರ್ಪಲು ಹೊದಿಸಲಾಗಿದೆ. ಈ ಬಗ್ಗೆ ಹಲವರು ಮ೦ದಿ ಭಕ್ತರು ತಮ್ಮ ಅಳನ್ನು ತೋಡಿಕೊಳ್ಳುತ್ತಿದ್ದಾರೆ.ಇಷ್ಟೆಲ್ಲಾ ಅದರೂ ಈ ವೇದಿಕೆಯ ಸಮಸ್ಯೆ ಪರಿಹಾರ ಮಾಡಲು ಕಷ್ಟವೇ ಎ೦ದು ಬೀದಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸ೦ಬ೦ಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಸರಿಪಡಿಸುವರೇ?