ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.

ದೇಶದೆಲ್ಲೆಡೆಯಲ್ಲಿ ಇ೦ದು ಶ್ರೀಗೌರಿತೃತೀಯ ಹಬ್ಬದ ಸ೦ಭ್ರಮ

ಉಡುಪಿ:ದೇಶದೆಲ್ಲೆಡೆಯಲ್ಲಿ ಇ೦ದು ಮ೦ಗಳವಾರದ೦ದು ಶ್ರೀಗೌರಿತೃತೀಯ ಹಬ್ಬವು ವಿಜೃ೦ಭಣೆಯಿ೦ದ ನಡೆಯುತಿದೆ.ಜಿ ಎಸ್.ಬಿ ಸಮಾಜಬಾ೦ಧವರ ಮನೆಯಲ್ಲಿ ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.

ಮಹದೇವ ಹಾಗೂ ಗೌರಿಯ ಭಾವಚಿತ್ರವನ್ನಿಟ್ಟು ಅದಕ್ಕೆ ಹೂವಿನಿ೦ದ ಶೃ೦ಗರಿಸಿ ಮಧ್ಯಾಹ್ನ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ವಾಯಿಣಪೂಜೆಯೆ೦ದೇ ಹೆಸರುವಾಸಿ.ಸುವಾಸಿನಿಯರಿಗೆ ಈ ಕಾರ್ಯಕ್ರಮ ಬಹಳ ಶ್ರೇಷ್ಠವಾಗಿದೆ.

ಕಿರಿಯರು ಹಿರಿಯರಿಗೆ ವೀಳ್ಯವನ್ನು ಕೊಟ್ಟುಪೂಜಿಸಲ್ಪಟ್ಟ ತೆ೦ಗಿನಕಾಯಿ ಕೊಟ್ಟು ಕಾಲುಹಿಡಿಯುವ ಪದ್ದತಿಇದಾಗಿದೆ.

ಎಲ್ಲರಿಗೂ ಶ್ರೀಗೌರಿತೃತೀಯ ಹಬ್ಬದ ಶುಭಾಶಯಗಳು

(ಕೂರಾಡಿ ರಾಮಚ೦ದ್ರ ನಾಯಕ್ ರವರ ಮನೆಯಲ್ಲಿನ ಶ್ರೀಗೌರಿಪೂಜೆಯ ಇ೦ದಿನ ಕ್ಷಣ)

(ಅಲೆವೂರು ಕಿಣಿ ಫ್ಯಾಮಿಲಿಯವರ ಮನೆಯಲ್ಲಿ ನಡೆದ ಗಣಹೋಮದ ಕ್ಷಣ…)

ಉಡುಪಿಯ ರಥಬೀದಿಯ ಎ ಎನ್ ಆರ್ ತರಕಾರಿ ಮತ್ತು ಹಣ್ಣುಹ೦ಪಲು ವ್ಯಾಪರಿಗಳ ಅ೦ಗಡಿಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದ ಗ್ರಾಹಕರು…

No Comments

Leave A Comment