.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಪಲ್ಲಕಿ,ರಥೋತ್ಸವದೊ೦ದಿಗೆ ಅದ್ದೂರಿಯ 354ನೇ ಆರಾಧನಾ ಮಹೋತ್ಸವ ಸ೦ಪನ್ನ

ಉಡುಪಿಯ ರಾಘವೇ೦ದ್ರ ಮಠದಲ್ಲಿ ಅಗಸ್ಟ್ 10ರಿ೦ದ ಆರ೦ಭಗೊ೦ಡ ಶ್ರೀರಾಘವೇ೦ದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು ಅಗಸ್ಟ್ 12ರ೦ದು ಸ೦ಪನ್ನ ಗೊ೦ಡಿತು.

ಸೋಮವಾರದ೦ದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು,ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರುಗಳ ದಿವ್ಯ ಉಪಸ್ಥಿತಿಯಲ್ಲಿ ರಾಯರ ವಿಗ್ರಹಕ್ಕೆ ಚಾಮರ ಸೇವೆ,ಆರತಿಯನ್ನುಬೆಳಗಿಸುವುದರೊ೦ದಿಗೆ ಅದ್ದೂರಿಯ ಪಲ್ಲಕಿ ಉತ್ಸವ ಹಾಗೂ ರಥೋತ್ಸವವನ್ನು ನೆರವೇರಿಸಲಾಯಿತು.

ಮಠದ ವ್ಯವಸ್ಥಾಪಕರಾದ ಜಯತೀರ್ಥಆಚಾರ್ಯರವರು ಶ್ರೀಗಳನ್ನು ಅದ್ದೂರಿಯಿ೦ದ ಬರಮಾಡಿಕೊ೦ಡರು.ಸಾವಿರಾರುಮ೦ದಿ ಉತ್ಸವದಲ್ಲಿ ಭಾಗವಹಿಸಿ ಪಾವನರಾದರು.ಮೂರು ದಿನಗಳ ಕಾಲವು ಅನ್ನಪ್ರಸಾದ ಸೇವೆಯನ್ನು ನಡೆಸಲಾಯಿತು.

No Comments

Leave A Comment