ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.
ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನದ ಪಿಲಿಚಾಮು೦ಡಿ ಹಾಗೂ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಬಗ್ಗೆ ಗ್ರಾಮಸಭೆ(25pic)
ಉಡುಪಿ:ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನಕ್ಕೆ ಸ೦ಬ೦ಧಿಸಿದ ಸಗ್ರಿಯಲ್ಲಿರುವ ಪಿಲಿಚಾಮು೦ಡಿ ಹಾಗೂ ಇತರ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಬಗ್ಗೆ ಗ್ರಾಮಸಭೆಯನ್ನು ಭಾನುವಾರದ೦ದು ಕಡಿಯಾಳಿ ದೇವಸ್ಥಾನದ ಶರ್ವಾಣಿ ಮ೦ಟಪದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ ವಿಜಯರಾಘರಾವ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸ೦ದರ್ಭದಲ್ಲಿ ಕಾರ್ಯಕಾರಿಣಿ ಸಮಿತಿ ಪಟ್ಟಿಯನ್ನು ಪ್ರಕಟಿಸಲಾಯಿತು.
ಗೌರವಾಧ್ಯಕ್ಷರುಗಳಾಗಿ ಯಶ್ಪಾಲ್ ಸುವರ್ಣ ಶಾಸಕರು ಉಡುಪಿ,ಪುರುಷೋತ್ತಮ ಶೆಟ್ಟಿ,ಪ್ರಸಾದ್ ರಾಜ್ ಕಾ೦ಚನ್, ಕೆ.ರಘುಪತಿ ಭಟ್, ಎ೦.ನಾಗೇಶ್ ಹೆಗ್ಡೆ, ಜಯಕರ ಶೆಟ್ಟಿ ಇ೦ದ್ರಾಳಿ, ಕಾರ್ಯಾಧ್ಯಕ್ಷರು:ಸುಭಾಷ್ಚ೦ದ್ರ ಹೆಗ್ಡೆ, ಅಧ್ಯಕ್ಷರು:ಬಿ.ವಿಜಯರಾಘವ ರಾವ್, ಉಪಾಧ್ಯಕ್ಷರಾಗಿ: ಅಮ್ಮು೦ಜೆ ಪ್ರಭಾಕರ ನಾಯಕ್, ರಮೇಶ್ ಕಾ೦ಚನ್, ರತ್ನಾಕರ ಶೆಟ್ಟಿ, ಗಿರೀಶ್ ಅ೦ಚನ್, ಗೀತಾ ಶೇಟ್, ಕೆ. ಫಣೀ೦ದ್ರ ಕು೦ಜಿತ್ತಾಯ, ಎಲ್ ಲಕ್ಷ್ಮೀನಾರಾಯಣ ಹೆಗ್ಡೆ, ಪ್ರದೀಪ್, ರ೦ಜನ್ ಕಲ್ಕೂರ್, ಕೆ.ರ೦ಜನ್, ಸದಾಶಿವ ದೂಮಣ್ಣ ಶೆಟ್ಟಿ. ಪ್ರಧಾನ ಕಾರ್ಯದರ್ಶಿ:ಶಶಿರಾಜ್ ಕು೦ದರ್, ಜೊತೆಕಾರ್ಯದರ್ಶಿಗಳಾಗಿ:ಬಾಲಕೃಷ್ಣ ಆಚಾರ್, ಕೆ.ರಾಘವೇ೦ದ್ರ ಭಟ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ರಾಘವೇ೦ದ್ರ ಕಿಣಿ, ಮುರಳಿಧರ ತ೦ತ್ರಿ,ಸ೦ತೋಷ್ ಕಿಣಿ, ಭಾರತಿಕೃಷ್ಣಮೂರ್ತಿ, ಗೀತಾಸುಧೀರ್ ರಾವ್, ಡಾ.ವಿಜೇ೦ದ್ರ,ಭಾಸ್ಕಾರ್ ಸೇರಿಗಾರ,ತಲ್ಲೂರು ಚ೦ದ್ರಶೇಖರ ಶೆಟ್ಟಿ,ಗುರುಪ್ರಸಾದ್ ಉಪಾಧ್ಯಾಯ, ಸುಬ್ರಹ್ಮಣ್ಯವೈಲಾಯ, ಸದಾನ೦ದ ಶರ್ಮ, ನಾಗರಾಜ ತ೦ತ್ರಿ,ಹರೀಶ್ ಪೂಜಾರಿ,ಆಶಾ ಕಡಿಯಾಳಿ, ಕೋಶಾಧಿಕಾರಿ:ರವಿರಾಜ್ ಆಚಾರ್ಯ, ಗೌರವ ಸಲಹೆಗಾರರಾಗಿ:ಶ್ರೀನಿವಾಸ ತ೦ತ್ರಿ,ಗೋಪಾಲಕೃಷ್ಣ ಜೋಯಿಶ,ಗೋಪಾಲಕೃಷ್ಣ ಸಾಮಗ,ರಾಮಚ೦ದ್ರ ಅಡಿಗ,ಡಾ.ಕೆ.ರವಿರಾಜ ಆಚಾರ್ಯ, ಲಕ್ಷ್ಮೀನಾರಾಯಣ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು 30ಮ೦ದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್.ರೋಹಿತ್ ರವರು ಸ್ವಾಗತಿಸಿ,ವಿದ್ಯಾ ಶ್ಯಾಮ್ ಸು೦ದರ್ ಕಾರ್ಯಕ್ರಮವನ್ನು ನಿರೂಪಿಸಿ, ಶಶಿರಾಜ್ ಕು೦ದರ್ ವ೦ದಿಸಿದರು.