.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಮಣಿಪಾಲ ಮಹಿಳಾ ಸಮಾಜದ ಸ್ಥಾಪಕರ ದಿನಾಚರಣೆ ಸಾಧಕರಿಗೆ ಸನ್ಮಾನ
ಮಣಿಪಾಲ: ಅಗಸ್ಟ್ :01,ಮಹಿಳಾ ಸಮಾಜ ಮಣಿಪಾಲ ಇದರ 63 ನೇ ಸ್ಥಾಪಕ ದಿನಾಚರಣೆ ರೋಟರಿ ಹಾಲ್ ಮಣಿಪಾಲ ಇತ್ತೀಚಿಗೆ ನೆಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ಮಾಹೆಯ ಶ್ರೀಮತಿ ವಸಂತಿ ರಾಮದಾಸ್ ಪೈ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿವಂಗತ ಶಾರದ ಪೈ, ಡಾ ಪದ್ಮ ರಾವ್ ಇವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾದ ಡಾ ರಾಜಶ್ರೀ ಎಸ್ ಕಿಣಿ ಯವರು ಸಮಾಜದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ನಾರಾಯಣಿ ನಾಯಕ್ , ಸಪ್ನಾ ಸಾಲಿನ್ಸ್ , ಏಕ್ತಾ ಜೈನ್ , ಪ್ಲಾವಿಯಾ ಮೆಂಡೋಂಕಾ ರವರನ್ನು ಗೌರವಿಸಿ ಮಾತನಾಡಿದರು , ಮಹಿಳೆಯರು ದೈನಂದಿನ ಕೆಲಸ ಕಾರ್ಯ ಜೊತೆ ಆರೋಗ್ಯದ ಹೆಚ್ಚಿನ ಗಮನ ಹರಿಸಬೇಕು ಕರೆ ನೀಡಿದರು ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶೃತಿ ಶೆಣೈ , ಉಪಾಧ್ಯಕ್ಷೆ ವ್ಯಜಯಂತಿ ಕಾಮತ್ , ಕಾರ್ಯದರ್ಶಿ ವಿಜಯಲಕ್ಷ್ಮೀ, ಸಹ ಕಾರ್ಯದರ್ಶಿ ಏಕ್ತ ಜೈನ , ಖಂಚಾಚಿ ಶಾಲಿನಿ ಜಿ ನಾಯಕ್ ,ರೇಷ್ಮಾ ತೋಟ ಉಪಸ್ಥಿತರಿದ್ದರು.