ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.

ಕಬಿನಿ ಜಲಾಶಯದಲ್ಲಿ ಬಿರುಕು: ಅಪಾಯದ ಅಂಚಿನಲ್ಲಿ ಕರ್ನಾಟಕ- ತಮಿಳುನಾಡಿನ ಜೀವನಾಡಿ!

ಮೈಸೂರು: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಎರಡರ ಜೀವನಾಡಿಯಾಗಿರುವ ಕಬಿನಿ ಜಲಾಶಯವು ತುಂಬಿ ತುಳುಕುತ್ತಿದೆ, ಆದರೆ ಕಲ್ಲಿನ ರಚನೆಯಲ್ಲಿ ಸಣ್ಣ ಬಿರುಕುಗಳು ಮತ್ತು ಕುಳಿಗಳು ಬೆಳೆದಿದ್ದು, 50 ವರ್ಷ ಹಳೆಯ ಅಣೆಕಟ್ಟನ್ನು ರಕ್ಷಿಸುವ ಅಗತ್ಯವಿದೆ.

ಜಲಾಶಯಕ್ಕೆ ತಕ್ಷಣ ಯಾವುದೇ ಅಪಾಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೆ ಉಂಟಾಗಿರುವ ಕುಳಿಗಳು ಮತ್ತು ಬಿರುಕುಗಳನ್ನು ಸರಿ ಪಡಿಸುವಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ವಿಳಂಬ ಮಾಡಬಾರದು ಎಂದು ತಿಳಿಸಿದ್ದಾರೆ. ನೀರಾವರಿ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ತಿಳಿದ ನಂತರ ರೋಬೋಟ್‌ಗಳು ಮತ್ತು ನೀರೊಳಗೆ ಕ್ಯಾಮೆರಾಗಳನ್ನು ಸಹ ನಿಯೋಜಿಸಿದ್ದರು.

ಬಿರುಕುಗಳು ಮತ್ತು ಕುಳಿಗಳು 40 ರಿಂದ 50 ಸೆಂ.ಮೀ.ಗಳಷ್ಟಿದ್ದು, ಅವುಗಳನ್ನು ಸರಿಪಡಿಸದಿದ್ದರೇ ಮತ್ತಷ್ಟು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳಿದರು. ಸಂಶೋಧನೆಗಳು ಮತ್ತು ಕಾವೇರಿ ನಿರಾವರಿ ನಿಗಮ ಲಿಮಿಟೆಡ್ ಅಧಿಕಾರಿಗಳ ವರದಿಯ ಆಧಾರದ ಮೇಲೆ, ಏಪ್ರಿಲ್ 24 ರಂದು ಮಲೆ ಮಹದೇಶ್ವರ ಬೆಟ್ಟಗಳಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯ ಸಚಿವ ಸಂಪುಟವು ಅಣೆಕಟ್ಟು ದುರಸ್ತಿ ಕಾರ್ಯಕ್ಕಾಗಿ 32.35 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದೆ.

ತಾಂತ್ರಿಕ ಅನುಮೋದನೆಯ ಹೊರತಾಗಿಯೂ, ಈ ಮಳೆಗಾಲದಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಮತ್ತು ನೀರಿನ ಒಳಹರಿವು ಹೆಚ್ಚಿರುವುದರಿಂದ ಅಧಿಕಾರಿಗಳು ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಅಣೆಕಟ್ಟು ಸುರಕ್ಷತಾ ಪರಿಶೀಲನಾ ತಂಡ ಮತ್ತು ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷರನ್ನು ಒಳಗೊಂಡ ಅಣೆಕಟ್ಟು ಸುರಕ್ಷತಾ ಸಮಿತಿಯು ಜಲಾಶಯವನ್ನು ಪರಿಶೀಲಿಸಿದೆ.

ಕಳೆದ 12 ವರ್ಷಗಳಿಂದ ಅಣೆಕಟ್ಟಿನಲ್ಲಿ ಸಣ್ಣ ಬಿರುಕು ಉಂಟಾಗಿದೆ ಆದರೆ ಕೆಆರ್‌ಎಸ್ ಅಣೆಕಟ್ಟಿನಂತೆ ಈ ಜಲಾಶಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಹೇಶ್ ಅವರು ಅಣೆಕಟ್ಟಿನಲ್ಲಿ ಬಿರುಕು ಮತ್ತು ಕುಳಿ ಇದೆ ಎಂದು ಒಪ್ಪಿಕೊಂಡರು. ನವೆಂಬರ್‌ನಲ್ಲಿ ಕೆಲಸ ಕೈಗೆತ್ತಿಕೊಳ್ಳಲು ಟೆಂಡರ್‌ಗಳನ್ನು ಆಹ್ವಾನಿಸಲು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.

ವೃತ್ತಿಪರ ಡೈವರ್‌ಗಳು ನೀರಿಗೆ ಹೋಗಿ ಬಿರುಕುಗಳನ್ನು ತುಂಬಲು ನೀರಿನಲ್ಲಿನ ಟರ್ಬಿಡಿಟಿ ಕಡಿಮೆಯಾಗಬೇಕು ಎಂದು ಅವರು ಹೇಳಿದರು. ನಾವು 85 ಕೋಟಿ ರೂ.ಗಳ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದೇವೆ. ಅಣೆಕಟ್ಟು ಬಲಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಿದ್ದೇವೆ. ಕಬಿನಿ ಜಲಾಶಯವನ್ನು ವರ್ಗ 2 ರ ಅಡಿಯಲ್ಲಿ ಇರಿಸಲಾಗಿರುವುದರಿಂದ, ಕೇಂದ್ರವು ಅದನ್ನು ಅನುಮೋದಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಅವರು ಹೇಳಿದರು. ಆದಾಗ್ಯೂ, ಅಣೆಕಟ್ಟಿನ ಸುರಕ್ಷತೆಗೆ ಯಾವುದೇ ತಕ್ಷಣದ ಬೆದರಿಕೆ ಇಲ್ಲ ಎಂದು ಅವರು ಹೇಳಿದರು.

No Comments

Leave A Comment