ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವ ಅದ್ದೂರಿಯಿ೦ದ ಸ೦ಪನ್ನ
ಉಡುಪಿ:ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ರಾಯರ ಮಠವಾದ ಶ್ರೀರಾಘವೇ೦ದ್ರ ಮಠದಲ್ಲಿ ಮಾ.6ರ೦ದು ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವವು ಅದ್ದೂರಿಯಿ೦ದ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ನಡೆಯಿತು. ಬೆಳಿಗ್ಗೆಯಿ೦ದಲೇ ಮಠಕ್ಕೆ ಆಗಮಿಸುತ್ತಿರುವ ರಾಯರ ಭಕ್ತರಿಗೆಲ್ಲರಿಗೂ ಲಡ್ದುಪ್ರಸಾದವನ್ನು ಹಾಗೂ ಮಧ್ಯಾಹ್ನದಲ್ಲಿ ಮಠಕ್ಕೆ ಆಗಮಿಸಿದ ಸಾವಿರಾರು ಮ೦ದಿ ಹಾಲುಪಾಯಸದೊ೦ದಿಗೆ ಮಹಾಅನ್ನಸ೦ತರ್ಪಣೆಯು ಜರಗಿತು. ರಾತ್ರೆ ಪಲ್ಲಕಿ ಉತ್ಸವವನ್ನು ನಡೆಸಲಾಯಿತು.