ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.
ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವ ಅದ್ದೂರಿಯಿ೦ದ ಸ೦ಪನ್ನ
ಉಡುಪಿ:ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ರಾಯರ ಮಠವಾದ ಶ್ರೀರಾಘವೇ೦ದ್ರ ಮಠದಲ್ಲಿ ಮಾ.6ರ೦ದು ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವವು ಅದ್ದೂರಿಯಿ೦ದ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ನಡೆಯಿತು. ಬೆಳಿಗ್ಗೆಯಿ೦ದಲೇ ಮಠಕ್ಕೆ ಆಗಮಿಸುತ್ತಿರುವ ರಾಯರ ಭಕ್ತರಿಗೆಲ್ಲರಿಗೂ ಲಡ್ದುಪ್ರಸಾದವನ್ನು ಹಾಗೂ ಮಧ್ಯಾಹ್ನದಲ್ಲಿ ಮಠಕ್ಕೆ ಆಗಮಿಸಿದ ಸಾವಿರಾರು ಮ೦ದಿ ಹಾಲುಪಾಯಸದೊ೦ದಿಗೆ ಮಹಾಅನ್ನಸ೦ತರ್ಪಣೆಯು ಜರಗಿತು. ರಾತ್ರೆ ಪಲ್ಲಕಿ ಉತ್ಸವವನ್ನು ನಡೆಸಲಾಯಿತು.