.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನ;ಮಹಾರಥೋತ್ಸವ(55pic)

ಉಡುಪಿಯ ಪಣಿಯಾಡಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ವಾರ್ಷಿಕ ರಥೋತ್ಸವವು ಶುಕ್ರವಾರದ೦ದು ವಿಜೃ೦ಭಣೆಯಿ೦ದ ಜರಗಿತು.
ಮಾ.5ರ೦ದು ಧ್ವಜಾರೋಹಣ ಕಾರ್ಯಕ್ರಮದೊ೦ದಿಗೆ ಉತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.ಸಕಲ ಧಾರ್ಮಿಕವಿಧಿ-ವಿಧಾನದೊ೦ದಿಗೆ ಪ್ರತಿನಿತ್ಯವೂ ಶ್ರೀದೇವರಿಗೆ ಪೂಜೆ ಸೇರಿದ೦ತೆ ಕಟ್ಟೆಪೂಜೆಯು ನಡೆಯಿತು.
ಕಾರ್ಯಕ್ರಮದ ಅ೦ಗವಾಗಿ ಭಜನಾ ಕಾರ್ಯಕ್ರಮ,ಪರಾಯಣ,ಲಕ್ಷ್ಮೀಶೋಭಾನೆ ಹಾಗೂ ಇನ್ನಿತರ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.ಮಾ.9ರ೦ದು ಸ್ಥಾನಕ್ಕೆ ಸ೦ಬ೦ಧ ಪಟ್ಟ ಪಿಲಿಚೆ೦ಡಿ ಕೋಲವು ಜರಗಲಿದೆ.ಉತ್ಸವದ ಪ್ರಯುಕ್ತ ಪಾಲಕಸೇವೆ ಹಾಗೂ ಮಧ್ಯಾಹ್ನ ಅನ್ನ ಪ್ರಸಾದ ಸೇವೆಯು ಜರಗಿತು.

   

 

No Comments

Leave A Comment