.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಬಸ್​ -ಬುಲೆರೋ ನಡುವೆ ಭೀಕರ ಅಪಘಾತ : 10 ಮಂದಿ ಮೃತ್ಯು : 19 ಜನರು ಗಂಭೀರ ಗಾಯ

ಮಿರ್ಜಾಪುರ್: ಛತ್ತಿಸ್​​ಗಢದಿಂದ ಪ್ರಯಾಗರಾಜ್​​ಗೆ ಹೊರಟಿದ್ದ ಸಮಯದಲ್ಲಿ ಬಸ್​ – ಬುಲೆರೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಸುಮಾರು 10 ಜನರ ಅಸುನೀಗಿದ್ದು. 19 ಜನರು ಭೀಕರವಾಗಿ ಗಾಯಗೊಂಡ ಘಟನೆ ಪ್ರಯಾಗರಾಜ್ ಹಾಗೂ ಮಿರ್ಜಾಪುರ್ ಹೆದ್ದಾರಿಯಲ್ಲಿ ನಡೆದಿದೆ.

ಛತ್ತೀಸ್​ಗಢದ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅಂತ ಪ್ರಯಾಣ ಬೆಳೆಸಿದ್ದರು. ಇತ್ತ ಪ್ರಯಾಗ್​ರಾಜ್​ಗೆ ಹೊರಟಿದ್ದ ಬಸ್​ನಲ್ಲಿಯೂ ಕೂಡ ರಾಜಘರ್ ಹಾಗೂ ಮಧ್ಯಪ್ರದೇಶದ ಭಕ್ತಾದಿಗಳು ಕೂಡ ಇದ್ದರು ಎಂದು ತಿಳಿದು ಬಂದಿದೆ.

ಹತ್ತು ಜನರನ್ನು ಕರೆದುಕೊಂಡು ಹೋಗಿತ್ತಿದ್ದ ಬುಲೆರೋ ಕಾರ್​ನಲ್ಲಿದ್ದ ಎಲ್ಲಾ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಪಕ್ಕದಲ್ಲಿರುವ ಸ್ವರೂಪ ರಾಣಿ ಮೆಡಿಕಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಗಾಯಾಳುಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪ್ರಯಾಗರಾಜ್​​ನ ಹೆಚ್ಚುವರಿ ಎಸ್​ಪಿ ವಿವೇಕ್ ಯಾದವ್ ಹೇಳಿದ್ದಾರೆ.

ಇನ್ನು ಭೀಕರ ಅಪಘಾತದ ಸುದ್ದಿ ತಿಳಿದ ಸಿಎಂ ಯೋಗಿ ಆದಿತ್ಯನಾಥ್​, ಆಡಳೀತಾಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸುವಂತೆ ಸೂಚನೆ ನಿಡಿದ್ದಾರೆ. ಅಲ್ಲದೇ ಆಗಬೇಕಾದ ರಕ್ಷಣಾ ಕಾರ್ಯವನ್ನು ತತಕ್ಷಣ ಕೈಗೊಳ್ಳಿ ಎಂದು ಹೇಳಿದ್ದಾರೆ.ಅಲ್ಲದೇ ವೈದ್ಯಕೀಯ ಸಿಬ್ಬಂದಿಗೆ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.

No Comments

Leave A Comment