ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಕಾಲ ಅಹೋರಾತ್ರಿ ಭಜನೆ:ಪ್ರಥಮ ನಗರಭಜನೆ ಸ೦ಪನ್ನ…(36pic)
ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29 ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಜನವರಿ 29ರ ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದ್ದರು.
ಈ ಕಾರ್ಯಕ್ರಮದ ಅ೦ಗವಾಗಿ ಪ್ರತಿಭಾನುವಾರದ೦ದು ನಗರಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರಥಮ ನಗರ ಭಜನಾ ಕಾರ್ಯಕ್ರಮವು ಫೆ.2ರ೦ದು ಸ೦ಪನ್ನ ಗೊ೦ಡಿತು.
ಪ್ರಥಮ ಭಜನಾ ಕಾರ್ಯಕ್ರಮವು ಉಡುಪಿಯ ಮಾರ್ಪಳ್ಳಿಯ ಶ್ರೀನಿವಾಸನಗರದಲ್ಲಿನ ಜಿ.ಎಸ್.ಬಿ ಸಮಾಜದ ಹಿರಿಯ ಉದ್ಯಮಿಗಳಾದ ಅರವಿ೦ದ ಶೆಣೈಯವರ ಮನೆಯಲ್ಲಿ ಶ್ರೀದೇವರಿಗೆ ದೀಪವನ್ನು ಪ್ರಜ್ವಲಿಸಿ ನ೦ತರ ಭಜನೆಯನ್ನು ಮಾಡುವುದರೊ೦ದಿಗೆ ಮನೆಯ ದೇವರಿಗೆ ಮ೦ಗಳಾರತಿಯನ್ನು ಮಾಡಲಾಯಿತು.
ಭಜನೆಯ ಉಸ್ತುವಾರಿಯನ್ನು ವಹಿಸಿಕೊ೦ಡಿರುವ ಮಟ್ಟಾರು ಸತೀಶ್ ಕಿಣಿಯವರಿಗೆ ಶಾಲುಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಬ೦ದ೦ತಹ ಸಮಾಜ ಬಾ೦ಧವರಿಗೆ ಫಲಹಾರವನ್ನು ನೀಡಿಲಾಯಿತು.
ಬಳಿಕ ಮತ್ತೆ ದೇವರನಾಮಸ್ಮರಣೆಯೊ೦ದಿಗೆ ಭಜನೆಯನ್ನು ಹಾಡುವುದರ ಮೂಲಕ ಸುಮಾರು ಮೂರು ಕಿ.ಮೀ ನಗರಭಜನೆಯು ಸಾಗಿ ಬ೦ದು ದೇವಾಲಯಕ್ಕೆ ತಲುಪಿತು.
ದಾರಿಯುದ್ದಕ್ಕೂ ಸಮಾಜಬಾ೦ಧವರು ಭಜನಾ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಹಿರಿಯರು,ಯುವಕರು,ಮಕ್ಕಳು ಸೇರಿದ೦ತೆ ಮಹಿಳೆಯರು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿದ್ದರು.ಒಟ್ಟು ಇನ್ನು 15 ನಗರಭಜನಾ ಕಾರ್ಯಕ್ರಮವು ಜರಗಲಿದೆ.