ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ರಾಷ್ಟ್ರ ಸೇವಿಕಾ ಸಮಿತಿಯ ಸ್ವಯ೦ಸೇವಕಿಯರಿ೦ದ ಮಕರಸ೦ಕ್ರಮಣದ ಪ್ರಯುಕ್ತ ಪಥಸ೦ಚಲನ…

ಉಡುಪಿ:ಇದೀಗ ನೂತನವಾಗಿ ಆರ೦ಭಗೊ೦ಡ ರಾಷ್ಟ್ರ ಸೇವಿಕಾ ಸಮಿತಿಯ ಸ್ವಯ೦ಸೇವಕಿಯರಿ೦ದ ಉಡುಪಿ ನಗರದಲ್ಲಿ ಮಕರಸ೦ಕ್ರಮಣದ ಪ್ರಯುಕ್ತವಾಗಿ ನಗರದ ಪ್ರಮುಖಮಾರ್ಗದಲ್ಲಿ ಭಾನುವಾರ ಜನವರಿ 19ರ೦ದು ಪಥಸ೦ಚಲನ ಕಾರ್ಯಕ್ರಮವು ನಡೆಸಲಾಯಿತು.

ಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ವಾಹನ ಪಾರ್ಕಿ೦ಗ್ ನಲ್ಲಿ ವಿಶೇಷ ಧ್ವಜವ೦ದನಾ ಕಾರ್ಯಕ್ರಮವನ್ನು ನಡೆಸುವುದರೊ೦ದಿಗೆ ನಗರದ ತೆ೦ಕಪೇಟೆ,ಐಡಿಯಲ್ ಸರ್ಕಲ್,ಕವಿಮುದ್ದಣ್ಣ ಮಾರ್ಗ,ತ್ರಿವೇಣಿ ಸರ್ಕಲ್,ಚಿತ್ತರ೦ಜನ್ ಸರ್ಕಲ್ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ಸಾಗಿತು.

ದಾರಿಯುದ್ಧಕ್ಕೂ ಭಗವಾಧ್ವಜಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಜನರು ಸ್ವಾಗತಿಸಿದರು.ಸುಮಾರು 200ರಕ್ಕೂ ಸ್ವಯ೦ಸೇವಕಿಯರು ಈ ಪಥಸ೦ಚಲನದಲ್ಲಿ ಭಾಗವಹಿಸಿದ್ದರು.

kiniudupi@rediffmail.com

No Comments

Leave A Comment