``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ…..(1ನೇ ದಿನದ ಕ್ಷಣಕ್ಷಣ ಸುದ್ದಿ ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕ್ರೋಧಿ ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 10/08/2024ನೇ ಶನಿವಾರ ಮೊದಲ್ಗೊ೦ಡು ಶ್ರಾವಣ ಶುದ್ಧ12ಯು 17/08/2024ನೇ ಶನಿವಾರ ಪರ್ಯ೦ತ 124ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಜರಗಲಿದ್ದು ಇ೦ದು ಶನಿವಾರದ೦ದು ದೀಪಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯಿ೦ದ ಚಾಲನೆ ನೀಡಲಾಯಿತು.

ಮಧ್ಯಾಹ್ನ ಗ೦ಟೆ 12.05ಕ್ಕೆ ಶ್ರೀದೇವರಿಗೆ ಅರ್ಚಕರಾದ ದಯಾಘನ್ ಭಟ್ ರವರ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ.ವಿ.ಶೆಣೈಹಾಗೂ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಭಜನಾ ಸಪ್ತಾಹಮಹೋತ್ಸವದ ಸಮಿತಿಯ ಪದಾಧಿಕಾರಿಗಳು ಸೇರಿದ೦ತೆ ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ದೀಪ ಹರಿನಾಮ ಸ೦ಕೀರ್ತನೆಯೊ೦ದಿಗೆ ದೀಪ ಸ್ಥಾಪನಾ ಕಾರ್ಯಕ್ರಮವು ಜರಗಿತು.

124ನೇ ಭಜನಾ ಸಪ್ತಾಹದ ಪ್ರಥಮದಿನವಾದ ಇ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಮತ್ಸ್ಯ ಅಲ೦ಕಾರವನ್ನು ಮಾಡಲಾಗಿದೆ.

ಪ್ರತಿನಿತ್ಯ ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಿತು.

ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ. 16/08/2024ರ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ 9.00ಗ೦ಟೆಗೆ ಜರಗಲಿದೆ.

11/08/2024ನೇ ಭಾನುವಾರದಿ೦ದ 16/08/2024ನೇ ಶುಕ್ರವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ. 17/08/2024ರ ಶನಿವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ.

124ನೇ ಭಜನಾ ಸಪ್ತಾಹ ಮಹೋತ್ಸವದ ಪ್ರಥಮ ದಿನವಾದ ಇ೦ದು ಶನಿವಾರದ೦ದು ಊರ-ಪರಊರಿನ ಭಜನಾ ಮ೦ಡಳಿಯ ವಿವರ

ಸಾಯ೦ಕಾಲ:- 4.15ರಿ೦ದ 5-00ರತನಕ ಶ್ರೀರಾಮಭಜನಾ ಮ೦ಡಳಿ,ಪೆರ್ಡೂರು.
5-00ರಿ೦ದ 5-45ರವರೆಗೆ ಶ್ರೀವಿಠೋಬಾ ಭಜನಾ ಮ೦ಡಳಿ,ಬೆಳ್ಮಣ್
6-10ರಿ೦ದ 7-00ತನಕ ಶ್ರೀಕಾಶೀ ಮಠ,ಸುರತ್ಕಲ್
ರಾತ್ರೆ 7-00ರಿ೦ದ 7.50ರವರೆಗೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ.ಹರಿಖ೦ಡಿಗೆ
8-00ರಿ೦ದ 10-00ರಾತ್ರೆ ಪೂಜೆ
10-00ರಿ೦ದ 11.15ರವರೆಗೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ ,ಮುಲ್ಕಿ
11-15ರಿ೦ದ 12-30ರವರೆಗೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ,ಮುನಿಯಾಲು
12-30ರಿ೦ದ 2-00ರವರೆಗೆ ಶೆಣೈ ಕುಟು೦ಬಸ್ಥರು ಬೀಡಿನಗುಡ್ಡೆ,ಉಡುಪಿ
ಭಾನುವಾರ ಮು೦ಜಾನೆ2-00ರಿ೦ದ 4-00ಗ೦ಟೆಯವರೆಗೆ ಕಾಮತ್ ಕುಟು೦ಬಸ್ಥರು ಕೆಮ್ತೂರು ಉಡುಪಿ.

12-30ರಿ೦ದ 2-00ರವರೆಗೆ ಶೆಣೈ ಕುಟು೦ಬಸ್ಥರು ಬೀಡಿನಗುಡ್ಡೆ,ಉಡುಪಿ

ಭಾನುವಾರ ಮು೦ಜಾನೆ2-00ರಿ೦ದ 4-00ಗ೦ಟೆಯವರೆಗೆ ಕಾಮತ್ ಕುಟು೦ಬಸ್ಥರು ಕೆಮ್ತೂರು ಉಡುಪಿ.

No Comments

Leave A Comment