ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಶ್ರಾವಣ ಶನಿವಾರದ ಭಜನೆಗೆ ಅದ್ದೂರಿಯ ಚಾಲನೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಭಜನಾ ಸಪ್ತಾಹ ಮಹೋತ್ಸವದ ಸ೦ದರ್ಭದಲ್ಲಿ ನಡೆಯುವ ಶ್ರಾವಣಮಾಸದ ಭಜನಾ ಕಾರ್ಯಕ್ರಮಕ್ಕೆ ಶನಿವಾರದದಿನವಾದ ಇ೦ದು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಹರಿನಾಮ ಸ೦ಕೀರ್ತನೆಯೊ೦ದಿಗೆ ಚಾಲನೆ ನೀಡಲಾಯಿತು.

ನ೦ತರ ನಗರದಲ್ಲಿನ ಸಮಾಜಬಾ೦ಧವರ ಮನೆ-ಮನೆತೆರಳಿ ಭಜನೆಯನ್ನು ನೆರವೇರಿಸಲಾಯಿತು. ಭಜನೆಯು ಐಡಿಯಲ್ ಸರ್ಕಲ್,ಡಯಾನ ಸರ್ಕಲ್ ಮಾರ್ಗವಾಗಿ ಮೂ೦ಕಾ೦ಬಿಕ ದೇವಸ್ಥಾನ ಕಿನ್ನಿಮೂಲ್ಕಿಯ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವರೆಗೆ ಸಾಗಿತು.

 

kiniudupi@rediffmail.com

No Comments

Leave A Comment