Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯಲ್ಲಿ ವನಮಹೋತ್ಸವ

ಉಡುಪಿ:ಬ್ರಹ್ಮಾವರದ ಹಂಗಾರಕಟ್ಟೆಯ ಚೇತನಾ ಪ್ರೌಢ ಶಾಲೆಯಲ್ಲಿ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ
ಔಷಧಿಯ ಸಸ್ಯಗಳನ್ನು ವಿದ್ಯಾರ್ಥಿಗಳಿಂದ ನೆಡಿಸಿ ವೃಕ್ಷಾರೋಪಣ ಮತ್ತು ವನಮಹೋತ್ಸವವನ್ನು ಆಚರಿಸಲಾಯಿತು ಇದೇ ಸ೦ದರ್ಭದಲ್ಲಿ ಆರೋಗ್ಯ ಭಾರತಿಯಿಂದ ಪ್ರಕಟಿತ ” ಬಾಲೋಪಚಾರ – ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಕೈಪಿಡಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು .

ಸಮಾರ೦ಭದಲ್ಲಿ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಭಟ್, ಗಿಡಗಳ ಪ್ರಾಯೋಜಕರಾದ ಭಾರತ್ ವಿಕಾಸ ಪರಿಷತ್ ನ ಉಡುಪಿ ಭಾರ್ಗವ ಶಾಖೆಯ ಕಾರ್ಯದರ್ಶಿ ಗಳಾದ ಎಸ್ ಎಸ್ ಶೆಣೈ ಮತ್ತು ಬಿವಿಪಿಯ ಸದಸ್ಯರು ಮತ್ತು ಭಾರತೀಯ ಮಜ್ದೂರ್ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ರತ್ನಾಕರ ದೇವಾಡಿಗ , ಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಪನಾ ಶೆಟ್ಟಿ , ನಿವೃತ್ತ ಶಿಕ್ಷಕಿ ಮತ್ತು ಮಕ್ಕಳ ಹಕ್ಕಿಗಾಗಿ ಕಾರ್ಯ ಮಾಡುತ್ತಿರುವ ಸಮಾಜಸೇವಕಿ ತಿಲೋತ್ತಮಾ ನಾಯಕ್ ಉಪಸ್ಥಿತರಿದ್ದರು ಹಾಗೂ ಶಾಲೆಯ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು .

No Comments

Leave A Comment