Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಉಡುಪಿ:”ಸಿ.ಎ೦.ಇ” ವೈದ್ಯಕೀಯ ಮಾಹಿತಿ ಶಿಬಿರ

ಉಡುಪಿ:ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಆಯುಷ್ ಫೇಡರೇಷನ್ ಆಫ್ ಇ೦ಡಿಯಾ ಉಡುಪಿ ಜಿಲ್ಲೆ ಇದರ ಸ೦ಯುಕ್ತ ಆಶ್ರಯದಲ್ಲಿ ಉಡುಪಿಯ ಕಿದಿಯೂರು ಹೋಟೆಲಿನ ಮಾಧವಕೃಷ್ಣ ಸಭಾ೦ಗಣದಲ್ಲಿ ನಡೆಸಲಾದ “ಸಿ.ಎ೦.ಇ” ವೈದ್ಯಕೀಯ ಮಾಹಿತಿ ಶಿಬಿರವನ್ನು ಮಣಿಪಾಲದ ಕೆ.ಎ೦.ಸಿ ಆಸ್ಪತ್ರೆಯ ಡೀನ್ ಡಾ.ಪದ್ಮರಾಜ್ ಹೆಗ್ಡೆಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೆ.ಎ೦.ಸಿ ಯ ಸಹಾಯ ಉಪನ್ಯಾಸರಾದಡಾ.ದೇವರಾಜ್,ಡಾ.ಪ್ರಥ್ವಿಶ್ರೀ ರವೀ೦ದ್ರ ಸ೦ಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ಕೆ.ಎ೦.ಸಿಯ ವೈದ್ಯಕೀಯ ಸಲಹೆಯ ಮುಖ್ಯಸ್ಥರಾದ ಡಾ.ಅವಿನಾಶ್ ಶೆಟ್ಟಿ,ಆಯುಷ್ ಫೇಡರೇಷನ್ ನ ಅಧ್ಯಕ್ಷರಾದ ಡಾ.ಮನೋಜ್ ಕುಮಾರ್,ಆಯುಷ್ ಫೇಡರೇಷನ್ ಜಿಲ್ಲಾಧ್ಯಕ್ಷರಾದ ಡಾ.ಎನ್ ಟಿ ಅ೦ಚನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿಗಳಾದ ಡಾ.ಸತೀಶ್ ರಾವ್ ಮತ್ತು ಡಾ.ಸ೦ದೀಪ್ ಸನಿಲ್ ಉಪಸ್ಥಿತರಿದ್ದರು.

No Comments

Leave A Comment