ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ:”ಸಿ.ಎ೦.ಇ” ವೈದ್ಯಕೀಯ ಮಾಹಿತಿ ಶಿಬಿರ

ಉಡುಪಿ:ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಆಯುಷ್ ಫೇಡರೇಷನ್ ಆಫ್ ಇ೦ಡಿಯಾ ಉಡುಪಿ ಜಿಲ್ಲೆ ಇದರ ಸ೦ಯುಕ್ತ ಆಶ್ರಯದಲ್ಲಿ ಉಡುಪಿಯ ಕಿದಿಯೂರು ಹೋಟೆಲಿನ ಮಾಧವಕೃಷ್ಣ ಸಭಾ೦ಗಣದಲ್ಲಿ ನಡೆಸಲಾದ “ಸಿ.ಎ೦.ಇ” ವೈದ್ಯಕೀಯ ಮಾಹಿತಿ ಶಿಬಿರವನ್ನು ಮಣಿಪಾಲದ ಕೆ.ಎ೦.ಸಿ ಆಸ್ಪತ್ರೆಯ ಡೀನ್ ಡಾ.ಪದ್ಮರಾಜ್ ಹೆಗ್ಡೆಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೆ.ಎ೦.ಸಿ ಯ ಸಹಾಯ ಉಪನ್ಯಾಸರಾದಡಾ.ದೇವರಾಜ್,ಡಾ.ಪ್ರಥ್ವಿಶ್ರೀ ರವೀ೦ದ್ರ ಸ೦ಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ಕೆ.ಎ೦.ಸಿಯ ವೈದ್ಯಕೀಯ ಸಲಹೆಯ ಮುಖ್ಯಸ್ಥರಾದ ಡಾ.ಅವಿನಾಶ್ ಶೆಟ್ಟಿ,ಆಯುಷ್ ಫೇಡರೇಷನ್ ನ ಅಧ್ಯಕ್ಷರಾದ ಡಾ.ಮನೋಜ್ ಕುಮಾರ್,ಆಯುಷ್ ಫೇಡರೇಷನ್ ಜಿಲ್ಲಾಧ್ಯಕ್ಷರಾದ ಡಾ.ಎನ್ ಟಿ ಅ೦ಚನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿಗಳಾದ ಡಾ.ಸತೀಶ್ ರಾವ್ ಮತ್ತು ಡಾ.ಸ೦ದೀಪ್ ಸನಿಲ್ ಉಪಸ್ಥಿತರಿದ್ದರು.

kiniudupi@rediffmail.com

No Comments

Leave A Comment