....ನಾಲ್ಕುದಿನಗಳ ಬ್ಯಾ೦ಕ್ ಬ೦ದ್...ಶ್ರೀಗೌರಿಗಣೇಶ ಹಬ್ಬಕ್ಕೆ ಭಕ್ತರಿ೦ದ ಸಕಲ ಸಿದ್ದತೆ...ಶ್ರೀಗಣೇಶ ವಿಗ್ರಹ ತಯಾರಿಕೆಯಲ್ಲಿ ತಲ್ಲೀನ ರಾಗಿರುವ ವಿಗ್ರಹ ರಚನೆಗಾರರು...

ಕಡಿಯಾಳಿ ಮಾತೃ ಮಂಡಳಿಯ ಆಶ್ರಯದಲ್ಲಿ 42 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತದ ಪೂಜೆ

ಉಡುಪಿ:ಅ 21 ; ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ 42 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮ ವೇದ ಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯಲ್ಲಿನ ಶ್ರೀಕಾತ್ಯಾಯನಿ ಮಂಟಪದಲ್ಲಿ ಜರಗಿತು .

ಶ್ರೀದೇವಿಯ ಸನ್ನಿಧಿಯಲ್ಲಿ  ಸಾಮೂಹಿಕ ಪ್ರಾರ್ಥನೆ , ಕಳಸ ಪ್ರತಿಷ್ಠಾಪನೆ , ಸಮೂಹಿಕ ಕುಂಕುಮ ಅರ್ಚನೆ , ಮಂಡಲ ಪೂಜೆ , ಮಹಾಮಂಗಳಾರತಿ ,ದೋರ ಗ್ರಂಥಿ ಸಹಿತ ಪ್ರಸಾದ ವಿತರಣೆ ನೆಡೆಯಿತು , ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀಶ ಭಟ್ ಎಲ್ಲೂರ ಅರ್ಚಕ ವೃಂದದವರು ನಡೆಸಿಕೊಟ್ಟರು.

ಧಾರ್ಮಿಕ ಸಭಾ ಕಾರ್ಯದ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಸುಪ್ರಸಾದ ಶೆಟ್ಟಿ , ಶೋಭಾ ಭಂಡಾರ್ಕರ್ , ಡಾ ಉಷಾ ಹೆಬ್ಬಾರ್ , ಮಾತೃ ಮಂಡಳಿಯ ಸ್ಥಾಪಕರಾದ ಸುಪ್ರಭಾ ಆಚಾರ್ಯ , ಅಧ್ಯಕ್ಷೆ ಪದ್ಮಾ ರತ್ನಾಕರ್ ,ಭಾರತಿ ಇಂದು ಶೇಖರ್ ಸ್ವಾಗತಿಸಿದರು , ಮಾತೃ ಮಂಡಳಿಯ ಸದಸ್ಯರು , 500 ರಕ್ಕೊ ಹೆಚ್ಚು ಸುಮಂಗಳೆಯರು ಉಪಸ್ಥಿತರಿದ್ದರು.

No Comments

Leave A Comment