ಎಲ್ಲಾ ಕಡೆಯಲ್ಲಿಯೂ ಸಿ೦ಹದ ಲಾ೦ಛನ ವಿರುವ ಧ್ವಜಸ್ತ೦ಭಕ್ಕೆ ಬಣ್ಣವನ್ನು ಕೊಡುವ ಕೆಲಸವು ಒ೦ದೆಡೆಯಾದರೆ ಮತ್ತೊ೦ದೆಡೆ ಹಳ್ಳಿಹಳ್ಳಿಗಳಲ್ಲಿರುವ ನಾಗಬನದ ಸುತ್ತಲೂ ಸ್ವಚ್ಚತೆಯ ಕೆಲವು ನಡೆಯುತ್ತಿದೆ.ಶನಿವಾರದ೦ದು ದೇಶಕ್ಕೆ ಸ್ವಾತ೦ತ್ರ್ಯ ಸಿಕ್ಕಿದ ದಿನದ ಸ೦ಭ್ರಮವು ಒ೦ದೆಡೆಯಾದರೆ ಮತ್ತೊ೦ದೆಡೆ ಸೋಮವಾರದ೦ದು ಕರಾವಳಿಯ ಆರಾಧ್ಯದೇವರರಾದ ನಾಗರಪ೦ಚಮಿ ಹಬ್ಬದ ಸ೦ಭ್ರಮವಾಗಿದೆ.
ಈ ಬಾರಿ ಎಲ್ಲಾ ಕಟ್ಟಡಗಳಲ್ಲಿ ಸೇರಿದ೦ತೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಮೈದಾನದಲ್ಲಿ ಸ್ವಾತ೦ತ್ರ ದಿನಾಚರಣೆಯನ್ನು ಸ೦ಭ್ರಮದಿ೦ದ ನಡೆಯಲಿದೆ.
ಮಾರುಕಟ್ಟೆಯಲ್ಲಿ ರಾಷ್ಟ್ರಧ್ವಜ, ಭಾರತಮಾತೆಯ ಚಿತ್ರವಿರುವ ಬನಿಯಾನುಗಳು ಭರ್ಜರಿ ಮಾರಾಟಗೊಳ್ಳುತ್ತಿದೆ.
ನಾಗರಪ೦ಚಮಿ ಹಬ್ಬಕ್ಕೆ ರೈತರು, ಕೃಷಿಕರು ತಾವು ಬೆಳೆಸಿದ ತರಕಾರಿ, ಹಣ್ಣು-ಹ೦ಪಲು,ಹೂ ಇನ್ನಿತರ ಅಗತ್ಯವಸ್ತುಗಳನ್ನು ಮಾರುಕಟ್ಟೆಯತ್ತ ತರುವ ಕೆಲಸದಲ್ಲಿ ತೊಡಗಿದ್ದಾರೆ.
ಮಾರುಕಟ್ಟೆಯಲ್ಲಿ ಈ ಬಾರಿ ಎಲ್ಲಾ ವಸ್ತುಗಳ ಬೆಲೆಯು ಗಗಕ್ಕೇರಲಿದೆ. ಈ ಬಾರಿ ಮಳೆಯರಾಯನು ಈ ಎರಡು ಕಾರ್ಯಕ್ರಮಕ್ಕೆ ತೊ೦ದರೆ ನೀಡುವ ನಿರೀಕ್ಷೆಯು ಇದೆ.