....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಉಡುಪಿ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಶ್ರೀ ಗುರು ಪೂರ್ಣಿಮಾ ಮಹೋತ್ಸವ ಪಲ್ಲಕ್ಕಿ ಉತ್ಸವ ಸ೦ಪನ್ನ

ಉಡುಪಿ: ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಮಹೋತ್ಸವ ಅಂಗವಾಗಿ ಬುಧವಾರದ೦ದು ಮಂಗಳವಾದ್ಯ,ಚೆ೦ಡೆವಾದನದೊ೦ದಿಗೆ ರಾತ್ರಿ ಪಲ್ಲಕ್ಕಿ ಉತ್ಸವ ನೆಡೆಯಿತು.

ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಅಲಂಕಾರ , ವಿಶೇಷ ಪೂಜೆ ಪ್ರಸಾದ ವಿತರಣೆ ನೆಡೆಯಿತು. ಮಂದಿರದ ಅರ್ಚಕರಾದ ಸತ್ಯೇಂದ್ರ ಮಹಾರಾಜ್ , ಓಂ ಪ್ರಕಾಶ್ , ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು.

ಮಂದಿರದ ಧರ್ಮದರ್ಶಿ ಕೆ. ಕೆ. ಅವರ್ಸೆಕರ್ ಮುಂಬಯಿ ,ಪುರುಷೋತ್ತಮ ಶೆಟ್ಟಿ,ಟ್ರಸ್ಟಿ ಗಳಾದ ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು , ಕಾಪು ಶಾಸಕರಾದ ಸುರೇಶ ಶೆಟ್ಟಿ ಗುರ್ಮೆ , ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ , ತೋನ್ಸೆ ನವೀನ್ ಶೆಟ್ಟಿ , ಮೋಹನ್ ಚಂದ್ರ ನಂಬಿಯಾರ್ , ವಿ ಜಿ ಶೆಟ್ಟಿ , ಶ್ರೀಮತಿ ಬಿಂದು ಶೆಟ್ಟಿ , ವಿಶ್ವನಾಥ್ ಶೆಟ್ಟಿ ಕಡೆಕಾರ್ , ಮೆನೇಜರ್ ರವೀಂದ್ರ ಪುತ್ರನ್ , ತಾರಾನಾಥ್ ಮೇಸ್ತ , ಟ್ರಸ್ಟಿಗಳು ಆಡಳಿತ ಮಂಡಳಿಯ ಸದಸ್ಯರು , ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಾವಿರಾರು ಭಕ್ತರೂ ಪೂಜೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು.

No Comments

Leave A Comment