....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಉಡುಪಿ ನಗರ ಸಭೆಯ ಎದುರಲ್ಲೇ ಮತ್ತೆ ತಲೆ ಎತ್ತಿದ ತೆರಿಗೆ ಸಂಗ್ರಹಗಾರರ ರಸೀದಿ ನೀಡುವ ಅನಧಿಕೃತ ಸೆಂಟರ್?

ಉಡುಪಿ: ಬಹುಕೋಟಿ ತೆರಿಗೆ ಪಡೆಯುತ್ತಿರುವ ನಗರ ಸಭೆ. ತೆರಿಗೆ ಕಟ್ಟಲು ನಗರಸಭೆ ಯ ಎದುರುಗಡೆನೇ ಮತ್ತೆ ಲ್ಯಾಪ್ ಟ್ಯಾಪ್ ಪ್ರಿಂಟರ್ ಮೂಲಕ  ತೆರಿಗೆ ಕಟ್ಟುವ ರಶೀದಿ ನೀಡುವ ವ್ಯವಸ್ಥೆ ಕಲ್ಪಿಸಿದ್ದು, ಮತ್ತೆ ಇಲ್ಲಿ ಈ ಹಿಂದೆ ನಡೆದ ತೆರಿಗೆ ವಂಚನೆ ಪ್ರಕರಣ ಕೂಡ ಈ  ಪ್ರದೇಶದಲ್ಲಿ ಕುಳಿತವರಿಂದಲೇ ಆಗಿದೆ. ತೆರಿಗೆ ವಂಚನೆ ಪ್ರಕರಣ ನಗರಠಾಣೆಯಲ್ಲಿ ದಾಖಲಾಗಿದ್ದರು. ಮತ್ತೆ ಅದೇ ಪ್ರಕಿಯೆಗೆ ಚಾಲೇನೆ ಕೊಟ್ಟಂತಾಗಿದೆ.

ಈ ಹಿಂದೆ ಇದೇ ಜಾಗದಲ್ಲಿ ಕುಳಿತವರಿಂದ ಬಾರಿ ತೆರಿಗೆ ವಂಚನೆಯಾಗಿದ್ದುನಗರಸಭೆ ಯು ಇಲ್ಲಿ ಕುಳಿತವರಿಗೆ ಸೂಕ್ತ ಭದ್ರತೆ ಮಳೆ ಬಿಸಿಲು ಕಾಲಕ್ಕೆ ರಕ್ಷಣೆ,ಇಲ್ಲ ಮತ್ತು. ಇವರಿಂದ ಭದ್ರತಾ ಠೇವಣ ಇರಿಸಿ ಅಧಿಕೃತ ಎಂದು ಘೋಷಣೆ ಮಾಡಬೇಕು. ಇವರಲ್ಲಿ ತೆರಿಗೆ ಕಟ್ಟುವ ರಸೀದಿ ಪಡೆದುಕೊಳ್ಳಬಹುದು ಎಂದು ಸಾರ್ವಜನಿಕರಿಗೆ ತಿಳಿಯಪಡಿಸಬೇಕು ಎ೦ದು ನಗರ ಸಭೆಯನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

No Comments

Leave A Comment