.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಮಹಿಳಾ ಸಮಾಜ ಮಣಿಪಾಲ- ನೂತನ ಅಧ್ಯಕ್ಷೆ ಹಾಗೂ ಪಧಾದಿಕಾರಿಗಳ ಆಯ್ಕೆ
ಮಣಿಪಾಲ; ಮಹಿಳಾ ಸಮಾಜ ಮಣಿಪಾಲ ಇದರ ವತಿಯಿಂದ ನೂತನ ಅಧ್ಯಕ್ಷೆ ಹಾಗೂ ಪದಾಧೀಕಾರಿಗಳ ಆಯ್ಕೆ ಪ್ರಕ್ರಿಯೇ ಮಣಿಪಾಲದ ಹೋಟೆಲ್ ಆಶ್ಲೇಷ್ ವಜ್ರ ಹಾಲ್ ನಲ್ಲಿ ಇತ್ತೀಚಿಗೆ ನೆಡೆಯಿತು.
ಮುಖ್ಯ ಅತಿಥಿಯಾಗಿದ ಸ್ನೇಹ ಪ್ರಭು , ಡಾ. ಜನೆಟ್ ಮಾರಿಯಾ ಆಂದ್ರಾದೆ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿವಂಗತ ಶಾರದ ಪೈ , ಡಾ.ಪದ್ಮ ರಾವ್ ಇವರ ಭಾವ ಚಿತ್ರ ಕೆ ಪುಷ್ಪಾ ನಮನ ಸಲ್ಲಿಸಿದರು.
ವೇದಿಕೆಯಲ್ಲಿ ಮಹಿಳಾ ಸಮಾಜದ ನೂತನ ಅಧ್ಯಕ್ಷೆಯಾಗಿ ವೈಜಯಂತಿ ಅಶೋಕ್ ಕಾಮತ್, ಉಪಾಧ್ಯಕ್ಷೆ ದೀಪ ಭಂಡಾರಿ, ಕಾರ್ಯದರ್ಶಿ ಸೋನಾಲಿ ಚಿಟಿಗೋಪಿಕರ್, ಸಹ ಕಾರ್ಯದರ್ಶಿ ಶಾರ್ಲೆಟ್ ವರ್ಗ್ ಹಿಸ್ , ಖಂಚಾಚಿ ಸೆಲಿನ್ ಅಪ್ಪು, ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಶೃತಿ ಶೆಣೈ, ಡಾ.ಗಿರಿಜಾ, ಶಾಲಿನಿ ಜಿ ನಾಯಕ್ , ಎಕ್ತ್ ಜೈನ ರೇಷ್ಮಾ ತೋಟ ಉಪಸಿತ್ಧರಿದ್ದರು.