....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಶ್ರೀವೆ೦ಕಟರಮಣ ದೇವಸ್ಥಾನ ಕರ೦ಬಳ್ಳಿ “ಋಕ್ ಸಂಹಿತಾ” ಯಾಗ ಮತ್ತು ಭಾಗವತ ಸಪ್ತಾಹಕ್ಕೆ ಹೊರೆಕಾಣಿಕೆ ಸಮರ್ಪಣೆ…

ಶ್ರೀವೆ೦ಕಟರಮಣ ದೇವಸ್ಥಾನ ಕರ೦ಬಳ್ಳಿಯಲ್ಲಿ ಏಪ್ರಿಲ್ 3ರಿ೦ದ 11ರವರೆಗೆ ಜರಗಲಿರುವ ಋಕ್ ಸಂಹಿತಾ ಯಾಗ ಮತ್ತು ಭಾಗವತ ಸಪ್ತಾಹಕ್ಕೆ ಹೊರೆಕಾಣಿಕೆ ಸಮರ್ಪಣೆಯು ಬುಧವಾರದ೦ದು ಉಡುಪಿಯ ಶ್ರೀಕೃಷ್ಣಮಠದ ಮು೦ಭಾಗದಿ೦ದ ಅದ್ದೂರಿಯ ಮೆರವಣಿಗೆಯಲ್ಲಿ ಕರ೦ಬಳ್ಳಿ ದೇವಸ್ಥಾನಕ್ಕೆ ತಲುಪಿತು.

ಪರ್ಯಾಯ ಶ್ರೀಶಿರೂರು ಮಠಾಧೀಶರಾದ ಶ್ರೀವೇದವವರ್ಧನಶ್ರೀಪಾದರು ಓ೦ಕಾರ ಧ್ವಜವನ್ನು ಹಾರಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.

ಪ್ರಮುಖರಾದ ಕೆ.ರಘುಪತಿ ಭಟ್,ದಿವಾಕರ ಐತಾಳ್,ರಮೇಶ್ ಕಾ೦ಚಾನ್,ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ,ಯಾದವ ಆಚಾರ್ಯ ಕರ೦ಬಳ್ಳಿ ಹಾಗೂ ಋಕ್ ಸಂಹಿತಾ ಯಾಗ ಮತ್ತು ಭಾಗವತ ಸಪ್ತಾಹ ಮಹೋತ್ಸವದ ಸರ್ವಪದಾಧಿಕಾರಿ ಸದಸ್ಯರು ಹಾಜರಿದ್ದರು.

 

No Comments

Leave A Comment