37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...

ಅಬ್ಬಬ್ಬಾ ಏನು ಸೆಕೆ…ಈ ಬೇಸಿಗೆಯಲ್ಲಿ 4ರಿಂದ 6 ದಿನ ಉಷ್ಣ ಅಲೆ ಸಾಧ್ಯತೆ: ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ಈ ಬೇಸಿಗೆಯಲ್ಲಿ ಕರ್ನಾಟಕದಲ್ಲಿ 4ರಿಂದ 6 ದಿನಗಳವರೆಗೆ ಉಷ್ಣ ಅಲೆ (Heat wave) ತಾಪಮಾನ ಗೋಚರವಾಗಬಹುದು. ಉತ್ತರ ಒಳನಾಡು ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳು ಹೆಚ್ಚು ಪರಿಣಾಮಕ್ಕೊಳಗಾಗುವ ಸಾಧ್ಯತೆ ಇದೆ.

IMD ದೀರ್ಘಾವಧಿ ಮುನ್ಸೂಚನೆಯ ಪ್ರಕಾರ, ಈ ಬಾರಿ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬೇಸಿಗೆ ಕಂಡುಬರುವ ಸಾಧ್ಯತೆ ಇದ್ದು, ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಉತ್ತರ ಒಳನಾಡಿನ 15 ಜಿಲ್ಲೆಗಳಲ್ಲಿ ಸರಾಸರಿ ತಾಪಮಾನವು ಸುಮಾರು 4 ಡಿಗ್ರಿವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಆರ್ದ್ರತೆಯಿಂದ ಉಷ್ಣ ಮತ್ತು ಒದ್ದೆಯಾದ ವಾತಾವರಣ (ಸಲ್ಟ್ರಿ ಕಂಡೀಷನ್) ಉಂಟಾಗಬಹುದು. ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಉಷ್ಣ ಅಲೆ ಸಾಧ್ಯತೆ ಕಡಿಮೆ ಇದ್ದು, ಕಳೆದ ವರ್ಷಕ್ಕಿಂತ 1.5–2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಬಹುದು.

ಪ್ರಸ್ತುತ ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗುತ್ತಿದೆ. ಹಾವೇರಿ (36.7°C) ಮತ್ತು ರಾಯಚೂರು (36.5°C) ಅತಿ ಹೆಚ್ಚು ತಾಪಮಾನ ದಾಖಲಿಸಿದರೆ, ಕೊಡಗು 32.5°C ಗರಿಷ್ಠ ತಾಪಮಾನದಿಂದ ತಂಪಾದ ಪ್ರದೇಶವಾಗಿದೆ.

ಉತ್ತರ ಒಳನಾಡು ಬೀದರ್, ಕಲಬುರಗಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಉಷ್ಣ ಅಲೆ ಸಂಭವಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ. ಈ ಎರಡು ತಿಂಗಳುಗಳು ಹೆಚ್ಚು ಒಣವಾಗಿರುವ ಸಾಧ್ಯತೆ ಇದ್ದು, ಮಳೆ ಸಾಧ್ಯತೆ ಕಡಿಮೆ. ಮೇ ತಿಂಗಳ ಅಂತ್ಯದ ವೇಳೆಗೆ ಮಾತ್ರ ಮಿಂಚು-ಗುಡುಗಿನೊಂದಿಗೆ ಮುಂಗಾರು ಪೂರ್ವ ಮಳೆಯಾಗಲಿದೆ.

ಒಟ್ಟು 90 ಬೇಸಿಗೆ ದಿನಗಳಲ್ಲಿ ಗರಿಷ್ಠ 6 ದಿನಗಳು ಮಾತ್ರ ಪ್ರತ್ಯೇಕ ಉಷ್ಣ ಅಲೆ ದಿನಗಳಾಗಬಹುದು, ಅಂದರೆ ಆ ದಿನಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕನಿಷ್ಠ 5 ಡಿಗ್ರಿ ಹೆಚ್ಚು ಇರಬಹುದು. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿದ ತಾಪಮಾನ ಮತ್ತು ಆರ್ದ್ರತೆಯಿಂದ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಶ್ವ ಹವಾಮಾನ ಸಂಸ್ಥೆ (WMO) ಪ್ರಕಾರ, ಸರಾಸರಿ ಗರಿಷ್ಠ ತಾಪಮಾನಕ್ಕಿಂತ 5 ಡಿಗ್ರಿ ಹೆಚ್ಚು ತಾಪಮಾನವು ಐದು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಮುಂದುವರಿದರೆ ಅದನ್ನು ಉಷ್ಣ ಅಲೆ ಎಂದು ಕರೆಯಲಾಗುತ್ತದೆ.

IMD ವರದಿ ಪ್ರಕಾರ, ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಾದ ಬೇಸಿಗೆಗೆ ಎಲ್‌ನಿನೋ–ಸೌದರ್ನ್ ಆಸಿಲೇಶನ್ (ENSO) ಮತ್ತು ಇಂಡಿಯನ್ ಓಷನ್ ಡೈಪೋಲ್ (IOD) ಪರಿಣಾಮ ಕಾರಣವಾಗಿವೆ.

No Comments

Leave A Comment