...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು(ಇ೦ದು) ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

TTD ಕಠಿಣ ನಿರ್ಧಾರ: Biggboss ಖ್ಯಾತಿಯ ಶಿವಜ್ಯೋತಿಗೆ ಜೀವನ ಪರ್ಯಂತ ತಿರುಮಲ ದೇವಸ್ಥಾನಕ್ಕೆ ಕಾಲಿಡದಂತೆ ನಿಷೇಧ!

ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯೂ ಖ್ಯಾತ ನಿರೂಪಕಿ ಮತ್ತು Biggboss ಖ್ಯಾತಿಯ ಶಿವ ಜ್ಯೋತಿಗೆ ಅನಿರೀಕ್ಷಿತ ಆಘಾತ ನೀಡಿದೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಟಿಟಿಡಿ, ನಿರೂಪಕಿ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದೆ. ತಿರುಪತಿ ದೇವಸ್ಥಾನಕ್ಕೆ ಬರದಂತೆ ಶಿವ ಜ್ಯೋತಿಗೆ ಜೀವಮಾನವಿಡೀ ನಿಷೇಧ ಹೇರಿ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಆಕೆಯ ಆಧಾರ್ ಕಾರ್ಡ್ ಅನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಇತ್ತೀಚೆಗೆ ಶಿವ ಜ್ಯೋತಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ತಿರುಮಲಕ್ಕೆ ಹೋಗಿದ್ದರು. ದರ್ಶನ ಸರದಿಯಲ್ಲಿ ನಿಂತು ತಮ್ಮ ಸಾಮಾಜಿಕ ಮಾಧ್ಯಮ ಅನುಯಾಯಿಗಳಿಗಾಗಿ ವೀಡಿಯೊವನ್ನು ರೆಕಾರ್ಡ್ ಮಾಡಿದರು. ಆ ವೀಡಿಯೊದಲ್ಲಿ ಅವರು ಮಾಡಿದ ಕೆಲವು ಕಾಮೆಂಟ್‌ಗಳು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ಸರದಿಯಲ್ಲಿ ನಿಂತಿದ್ದ ಶಿವ ಜ್ಯೋತಿ, ನಾವು ಅತ್ಯಂತ ಶ್ರೀಮಂತ ಭಿಕ್ಷುಕರು, ಸ್ವಾಮಿ ಪ್ರಸಾದಕ್ಕಾಗಿ ಬೇಡಿಕೊಳ್ಳುತ್ತೇವೆ ಎಂದು ಹೇಳಿದರು. ಸಾಮಾನ್ಯವಾಗಿ, ಭಿಕ್ಷುಕ ಎಂಬ ಪದವು ತುಂಬಾ ನಕಾರಾತ್ಮಕ ಅರ್ಥವನ್ನು ಹೊಂದಿದೆ. ತಿರುಮಲದ ಭಕ್ತಿ ಮತ್ತು ಪವಿತ್ರ ದರ್ಶನದ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಗವಂತನ ಭಕ್ತರು ಮತ್ತು ಹಿಂದೂ ಧಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಶಿವ ಜ್ಯೋತಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದಾಗ, ಭಕ್ತರು ನಿರೂಪಕಿಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದರು. ಭಗವಂತನ ಮೇಲೆ ಭಕ್ತಿ ಇಲ್ಲದವರು ಅಂತಹ ಪವಿತ್ರ ಸ್ಥಳಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಟಿಟಿಡಿ ತಕ್ಷಣ ಆಕೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿದ್ದರು. ಅಲ್ಲದೆ ಈ ವಿಷಯವನ್ನು ಟಿಟಿಡಿ ಮಂಡಳಿಯ ಗಮನಕ್ಕೂ ತಂದಿದ್ದರು.

ವಿವಾದ ತೀವ್ರಗೊಳ್ಳುತ್ತಿದ್ದಂತೆ, ಶಿವ ಜ್ಯೋತಿ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು ವೀಡಿಯೊ ಮೂಲಕ ಎಲ್ಲಾ ಭಕ್ತರಲ್ಲಿ ಕ್ಷಮೆಯಾಚಿಸಿದರು. ನಾನು ತಪ್ಪಾಗಿ ಮಾತನಾಡಿದ್ದೇನೆ. ಮೊದಲನೆಯದಾಗಿ, ನಾನು ಎಲ್ಲಾ ಭಕ್ತರಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಹಾಗೆ ಹೇಳಬಾರದಿತ್ತು. ಆದರೆ, ನಾನು ಬೇರೆ ಯಾವುದೇ ದುರುದ್ದೇಶದಿಂದ ಹಾಗೆ ಹೇಳಲಿಲ್ಲ. ನಾನು ವೆಂಕಟೇಶ್ವರ ಸ್ವಾಮಿ ಬಗ್ಗೆ ತುಂಬಾ ಭಕ್ತಿ ಇದೆ ಎಂದರು. ಆದಾಗ್ಯೂ, ನಿರೂಪಕಿಯ ಪಶ್ಚಾತ್ತಾಪದ ಹೊರತಾಗಿಯೂ, ಟಿಟಿಡಿ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ಪವಿತ್ರ ಸ್ಥಳದಲ್ಲಿದ್ದು, ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡುವುದರ ಜೊತೆಗೆ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮಂಡಳಿಯು ಭಾವಿಸಿದೆ.

ಟಿಟಿಡಿ ತೆಗೆದುಕೊಂಡ ಇತ್ತೀಚಿನ ನಿರ್ಧಾರದ ಪ್ರಕಾರ, ನಿರೂಪಕಿ ಶಿವ ಜ್ಯೋತಿ ಅವರ ಆಧಾರ್ ಕಾರ್ಡ್ ಅನ್ನು ನಿರ್ಬಂಧಿಸಲಾಗಿದೆ. ಇದರರ್ಥ ಭವಿಷ್ಯದಲ್ಲಿ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ತಿರುಮಲದಲ್ಲಿ ಶ್ರೀವಾರಿ ದರ್ಶನಕ್ಕೆ ಟಿಕೆಟ್‌ಗಳು ಅಥವಾ ವಸತಿ ಸೌಕರ್ಯವನ್ನು ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಇದು ಅವರ ತಿರುಮಲ ದರ್ಶನಗಳ ಮೇಲೆ ಶಾಶ್ವತ ನಿಷೇಧದಂತಿದೆ. ಈ ಕ್ರಮವು ಇತರ ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಎಚ್ಚರಿಕೆಯಾಗಲಿದೆ. ಪವಿತ್ರ ದೇವಾಲಯಗಳಿಗೆ ಭೇಟಿ ನೀಡುವಾಗ ಭಕ್ತರ ಭಾವನೆಗಳನ್ನು ಗೌರವಿಸಲು ಮತ್ತು ಪ್ರಚಾರವನ್ನು ಮೀರಿ ಭಕ್ತಿಯ ಭಾವನೆಯಿಂದ ವರ್ತಿಸಲು ಟಿಟಿಡಿ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ.

No Comments

Leave A Comment