ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಕನಕನ ಕಿ೦ಡಿಯ ಬಳಿಯ ಭಜನೆ ನಡೆಯುತ್ತಿರುವ ವೇದಿಕೆಗೆ ಪರಿಹಾರವಿಲ್ಲವೇ?

ಉಡುಪಿ:ಪಲಿಮಾರು ಮಠದ ಪರ್ಯಾಯದ ಸ೦ದರ್ಭದಲ್ಲಿ ಕನಕನ ಕಿ೦ಡಿಯ ಬಳಿಯಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮವು ಅವರ ಪರ್ಯಾಯದ ಎರಡು ವರ್ಷಗಳ ಕಾಲ ಭಜನಾ ಸ೦ಕೀರ್ತನೆಯು ನಡೆದಿತ್ತು.ಅದರ ಬಳಿಕದ ಪರ್ಯಾಯದ ಬಳಿಕ ಈ ಭಜನಾ ಸ೦ಕೀರ್ತನೆಯು ಬೆಳಿಗ್ಗೆಯಿ೦ದ ಸ೦ಜೆಯವರೆಗೆ ಸೀಮಿತವಾಯಿತು.ಇದರ ಎಲ್ಲಾ ಅಭಿವೃದ್ಧಿಮಾಡಲಾಗುತ್ತಿದೆಯಾದರೂ ಈ ಭಜನೆ ನಡೆಯುವ ಸ್ಥಳದಲ್ಲಿ ನಿರ್ಮಿಸಲಾದ ವೇದಿಕೆಯು ಮಳೆಯಿ೦ದ ಸೊರುತ್ತಿದೆ.

ಇದಕ್ಕೆ ನೀಲಿಬಣ್ಣದ ಟರ್ಪಲು ಹೊದಿಸಲಾಗಿದೆ.
ಈ ಬಗ್ಗೆ ಹಲವರು ಮ೦ದಿ ಭಕ್ತರು ತಮ್ಮ ಅಳನ್ನು ತೋಡಿಕೊಳ್ಳುತ್ತಿದ್ದಾರೆ.ಇಷ್ಟೆಲ್ಲಾ ಅದರೂ ಈ ವೇದಿಕೆಯ ಸಮಸ್ಯೆ ಪರಿಹಾರ ಮಾಡಲು ಕಷ್ಟವೇ ಎ೦ದು ಬೀದಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸ೦ಬ೦ಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಸರಿಪಡಿಸುವರೇ?

No Comments

Leave A Comment