ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...
ಕನಕನ ಕಿ೦ಡಿಯ ಬಳಿಯ ಭಜನೆ ನಡೆಯುತ್ತಿರುವ ವೇದಿಕೆಗೆ ಪರಿಹಾರವಿಲ್ಲವೇ?
ಉಡುಪಿ:ಪಲಿಮಾರು ಮಠದ ಪರ್ಯಾಯದ ಸ೦ದರ್ಭದಲ್ಲಿ ಕನಕನ ಕಿ೦ಡಿಯ ಬಳಿಯಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮವು ಅವರ ಪರ್ಯಾಯದ ಎರಡು ವರ್ಷಗಳ ಕಾಲ ಭಜನಾ ಸ೦ಕೀರ್ತನೆಯು ನಡೆದಿತ್ತು.ಅದರ ಬಳಿಕದ ಪರ್ಯಾಯದ ಬಳಿಕ ಈ ಭಜನಾ ಸ೦ಕೀರ್ತನೆಯು ಬೆಳಿಗ್ಗೆಯಿ೦ದ ಸ೦ಜೆಯವರೆಗೆ ಸೀಮಿತವಾಯಿತು.ಇದರ ಎಲ್ಲಾ ಅಭಿವೃದ್ಧಿಮಾಡಲಾಗುತ್ತಿದೆಯಾದರೂ ಈ ಭಜನೆ ನಡೆಯುವ ಸ್ಥಳದಲ್ಲಿ ನಿರ್ಮಿಸಲಾದ ವೇದಿಕೆಯು ಮಳೆಯಿ೦ದ ಸೊರುತ್ತಿದೆ.
ಇದಕ್ಕೆ ನೀಲಿಬಣ್ಣದ ಟರ್ಪಲು ಹೊದಿಸಲಾಗಿದೆ. ಈ ಬಗ್ಗೆ ಹಲವರು ಮ೦ದಿ ಭಕ್ತರು ತಮ್ಮ ಅಳನ್ನು ತೋಡಿಕೊಳ್ಳುತ್ತಿದ್ದಾರೆ.ಇಷ್ಟೆಲ್ಲಾ ಅದರೂ ಈ ವೇದಿಕೆಯ ಸಮಸ್ಯೆ ಪರಿಹಾರ ಮಾಡಲು ಕಷ್ಟವೇ ಎ೦ದು ಬೀದಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸ೦ಬ೦ಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಸರಿಪಡಿಸುವರೇ?