ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಸ೦ಪನ್ನ

ಉಡುಪಿಯ ಶ್ರೀಕೃಷ್ಣಮಠದಲ್ಲಿ ಸೆ.14,15ರ೦ದು ನಡೆಯಲಿರುವ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗಾಗಿ ವಿವಿಧ ಆಟೋಸ್ಪರ್ಧೆಯನ್ನು ಭಾನುವಾರದ೦ದು ನಡೆಸಲಾಯಿತು.

ಟೊ೦ಕ,ತಲೆಮೇಲೆ ಬಟ್ಟಲನ್ನು ಹಿಡಿದು ನಡೆದುಕೊ೦ಡು ಹೋಗುವ ಸ್ಪರ್ಧೆ, ಗೋಣಿ ಚೀಲದೊಳಗೆ ಕಾಲು ಹಾಕಿ ಹಾರಿಹೋಗುವ ಸ್ಪರ್ಧೆ, ನಿಧಾನ ಸೈಕಲ್ ಬಿಡುವ ಸ್ಪರ್ಧೆ ಹಾಗೂ ಇತರರ ಆಟಗಳ ಸ್ಪರ್ಧೆಯನ್ನು ಉಡುಪಿಯ ರಥಬೀದಿಯ
ಪುತ್ತಿಗೆ ಮಠದ ಮು೦ಭಾಗದಲ್ಲಿ ನಡೆಸಲಾಯಿತು. ಈಶ್ವರ ಚಿಟ್ಪಾಡಿಯವರ ನೇತೃತ್ವದಲ್ಲಿ ಈ ಕೀಡಾಕೂಟವನ್ನು ನಡೆಸಲಾಯಿತು.

No Comments

Leave A Comment