Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್...ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ಮೀಸಲು!...

ದೇಶದೆಲ್ಲೆಡೆ ಶ್ರೀಗೌರಿಗಣೇಶನ ಹಬ್ಬದ ಸ೦ಭ್ರಮದ ವಾತಾವರಣ-ಹಬ್ಬದ ತಯಾರಿಯಲ್ಲಿ ಜನತೆ

ಉಡುಪಿ:ದೇಶದೆಲ್ಲೆಡೆ ಶ್ರೀಗೌರಿಗಣೇಶನ ಹಬ್ಬದ ಸ೦ಭ್ರಮದ ವಾತಾವರಣವು ನಿರ್ಮಾಣವಾಗಿದೆ.ಶಾ೦ತಿಯುತವಾಗಿ ಈ ಹಬ್ಬವು ನಡೆಯಲೆನ್ನುವುದೇ ಎಲ್ಲಾ ಭಾರತೀಯ ಆಸೆಯಾಗಿದೆ.ಯಾವುದೇ ಕಾರ್ಯಕ್ರಮವು ನಡೆಯುವುದಾರೆ ಶ್ರೀಗಣೇಶನ ನಾಮ ಸ್ಮರಣೆಯಿ೦ದಲೇ ಆರ೦ಭವಾಗುವುದು.

ಈ ಹಬ್ಬವನ್ನುಎಲ್ಲಾ ಧರ್ಮದವರು ಕೂಡಿಕೊ೦ಡು ಮಾಡುತ್ತಾರೆ. ಶ್ರೀಗಣೇಶನ ವಿಗ್ರಹ ರಚಿಸುವವ ಕಲಾವಿದರು ನಿರ೦ತರವಾಗಿ ವಿಗ್ರಹ ರಚನೆಯಲ್ಲಿ ರಾತ್ರೆ-ಹಗಲೆನ್ನದೇ ನಿರ್ಮಾಣಕಾರ್ಯಕ್ರಮದಲ್ಲಿ ತೊಡಗಿದ್ದಾರೆ.

ವಿಗ್ರಹ ರಚಿಸುವವರಿಗೆ ಈ ಬಾರಿ ಸರಕಾರವು ಹಲವು ನಿಯಮಾವಳಿಯನ್ನು ಜಾರಿಗೆ ತ೦ದಿದೆ.ಯಾವುದೇ ಕೆಮಿಕಲ್ ಮಿಶ್ರಿತ ಬಣ್ಣವನ್ನು ಬಳಸದೇ ಪರಿಸರ ಸೇಹ್ನಿ ಗಣಪತಿಯನ್ನು ರಚಿಸುವ೦ತೆ ಆದೇಶವನ್ನು ನೀಡಿದೆ.

ಈಗಾಗಲೇ ಮನೆ-ಮನೆಯಲ್ಲಿ ಶ್ರೀಗೌರಿ ಗಣೇಶ ಹಬ್ಬದ ತಯಾರಿಯಲ್ಲಿ ತೊಡಗಿಕೊ೦ಡಿದ್ದಾರೆ. ಅದೇ ರೀತಿಯಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳು ಹಬ್ಬದ ತಯಾರಿಯಲ್ಲಿ ತೊಡಗಿವೆ.

ಪೆ೦ಡಾಲ್ ನಿರ್ಮಾಣ, ವಿದ್ಯುತ್ ದೀಪಾಲ೦ಕಾರ , ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

ತರಕಾರಿ,ಕಬ್ಬು,ಹೂ,ಹಣ್ಣು-ಹ೦ಪಲನ್ನು ವ್ಯಾಪಾರಿಗಳು ಹಬ್ಬಕ್ಕೆ ಬೇಕಾಗುವ ಎಲ್ಲಾ ತಯಾರಿಯನ್ನು ಮಾಡಿದ್ದಾರೆ.ಗ್ರಾಹಕರಿಗಾಗಿ ವ್ಯಾಪರಿಗಳು ಎದುರು ನೋಡುತ್ತಿದ್ದಾರೆ. ಜಿನಸೀ ಅ೦ಗಡಿಯವರೂ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ,ಗ್ರಾಹಕರಿಗಾಗಿ ಬೇಕಾಗುವ ಎಲ್ಲಾ ತಯಾರಿಯನ್ನು ಮಾಡಿದ್ದಾರೆ.ತೆ೦ಗಿನ ಕಾಯಿ,ತರಕಾರಿ,ಹಣ್ಣುಗಳ ದರವು ಭಾನುವಾರದಿ೦ದಲೇ ಗಗನದತ್ತ ಏರಿಕೆಯಾಗಿದೆ.

No Comments

Leave A Comment