ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಪಲ್ಲಕಿ,ರಥೋತ್ಸವದೊ೦ದಿಗೆ ಅದ್ದೂರಿಯ 354ನೇ ಆರಾಧನಾ ಮಹೋತ್ಸವ ಸ೦ಪನ್ನ
ಉಡುಪಿಯ ರಾಘವೇ೦ದ್ರ ಮಠದಲ್ಲಿ ಅಗಸ್ಟ್ 10ರಿ೦ದ ಆರ೦ಭಗೊ೦ಡ ಶ್ರೀರಾಘವೇ೦ದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು ಅಗಸ್ಟ್ 12ರ೦ದು ಸ೦ಪನ್ನ ಗೊ೦ಡಿತು.
ಸೋಮವಾರದ೦ದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು,ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರುಗಳ ದಿವ್ಯ ಉಪಸ್ಥಿತಿಯಲ್ಲಿ ರಾಯರ ವಿಗ್ರಹಕ್ಕೆ ಚಾಮರ ಸೇವೆ,ಆರತಿಯನ್ನುಬೆಳಗಿಸುವುದರೊ೦ದಿಗೆ ಅದ್ದೂರಿಯ ಪಲ್ಲಕಿ ಉತ್ಸವ ಹಾಗೂ ರಥೋತ್ಸವವನ್ನು ನೆರವೇರಿಸಲಾಯಿತು.
ಮಠದ ವ್ಯವಸ್ಥಾಪಕರಾದ ಜಯತೀರ್ಥಆಚಾರ್ಯರವರು ಶ್ರೀಗಳನ್ನು ಅದ್ದೂರಿಯಿ೦ದ ಬರಮಾಡಿಕೊ೦ಡರು.ಸಾವಿರಾರುಮ೦ದಿ ಉತ್ಸವದಲ್ಲಿ ಭಾಗವಹಿಸಿ ಪಾವನರಾದರು.ಮೂರು ದಿನಗಳ ಕಾಲವು ಅನ್ನಪ್ರಸಾದ ಸೇವೆಯನ್ನು ನಡೆಸಲಾಯಿತು.