ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಪುರಿಯ ಗುಂಡಿಚಾ ದೇವಸ್ಥಾನ ಹೊರಗೆ ಕಾಲ್ತುಳಿತ: ಮೂವರು ಸಾವು, 50 ಕ್ಕೂ ಹೆಚ್ಚು ಜನರಿಗೆ ಗಾಯ, 6 ಮಂದಿ ಸ್ಥಿತಿ ಗಂಭೀರ
ಭುವನೇಶ್ವರ/ ಪುರಿ: ಭಾನುವಾರ ಬೆಳಗಿನ ಜಾವ ಪುರಿಯ ಗುಂಡಿಚಾ ದೇವಸ್ಥಾನದ ಮುಂದೆ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಭಕ್ತರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, 6 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಥಯಾತ್ರೆಯ ರಥ ಎಳೆಯುವ ಆಚರಣೆ ಮುಗಿದು ಗುಂಡಿಚಾ ದೇವಸ್ಥಾನದ ಮುಂದೆ ಮೂರು ರಥಗಳನ್ನು ನಿಲ್ಲಿಸಿದ ನಂತರ ನಸುಕಿನ ಜಾವ 3:30 ರಿಂದ 4:30 ರ ನಡುವೆ ಈ ಘಟನೆ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರನೆಯವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಮಾಧ್ಯಮಗಳಿಗೆ ಈ ಸಾವನ್ನು ದೃಢಪಡಿಸಿದರು, ಇತರ ಆರು ಜನರನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಅವರಲ್ಲಿ ಮೂವರನ್ನು ಈಗ ಬಿಡುಗಡೆ ಮಾಡಲಾಗಿದೆ.
ಮೃತರನ್ನು ಬೋಲಗಢದ ಬಸಂತಿ ಸಾಹು (36), ಬಲಿಪಟ್ಣದ ಪ್ರವತಿ ದಾಸ್ (45) ಮತ್ತು ಖುರ್ದಾದ ಪ್ರೇಮಕಾಂತ್ ಮೊಹಂತಿ (78) ಎಂದು ಗುರುತಿಸಲಾಗಿದೆ.