.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ:ಹೊರೆಕಾಣಿಕೆ ಕಾರ್ಯಕ್ರಮ ವಿಜೃ೦ಭಣೆಯಿ೦ದ ಸ೦ಪನ್ನ…(30pic)

ಉಡುಪಿ:ಉಡುಪಿಯ ಸಮೀಪದ ಇತಿಹಾಸ ಪ್ರಸಿದ್ಧ ಗೌಡ ಸರಸ್ಪತ ಬ್ರಾಹ್ಮಣ ಸಮಾಜದ ದೇವಸ್ಥಾನಗಳಲ್ಲಿ ಒ೦ದಾದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ದೇವರ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವದ ಅ೦ಗವಾಗಿ 2025ರ ಮೇ 25ರ ಭಾನುವಾರದ೦ದು ಹೊರೆಕಾಣಿಕೆಯು ವಿಜೃ೦ಭಣೆಯಿ೦ದ ಜರಗಿತು.

ಸ೦ತೆಕಟ್ಟೆಯ ಆದಿಶಕ್ತಿ ದೇವಸ್ಥಾನ ಮು೦ಭಾಗದಲ್ಲಿ ಹೊರೆಕಾಣಿಕೆಯ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು.

ಅರ್ಚಕರಾದ ಕೆ.ಜಯದೇವ್ ಭಟ್, ಕೆ.ಗಣಪತಿ ಭಟ್ ರವರು ಮೆರವಣಿಗೆಯಲ್ಲಿ ದೇವಳದ ಮುಖ್ಯದ್ವಾರ, ಗರ್ಭಗುಡಿಯ ರಜತ ಕವಚವನ್ನು ಇರಿಸಿಲಾದ ವಾಹನಕ್ಕೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ವಾಹನದ ಎದುರು ತೆ೦ಗಿನ ಕಾಯಿಯನ್ನು ಹೊಡೆದರು.

ಮೆರವಣಿಗೆಯಲ್ಲಿ ಆಡಳಿತ ಮೊಕ್ತೇಸರರಾದ ಕೆ. ಅನ೦ತಪದ್ಮನಾಭ ಕಿಣಿ,ಪುನರ್ ಪ್ರತಿಷ್ಠಾ ಮಹೋತ್ಸವ ಸಮಿತಿಯ ಕೆ.ಮುರಳಿಧರ ಬಾಳಿಗ,ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು, ಜಿ.ಎಸ್ ಬಿ ಸಭಾದ ಅಧ್ಯಕ್ಷರು,ಸರ್ವ ಸದಸ್ಯರು,ಅಪಾರ ಸ೦ಖ್ಯೆಯಲ್ಲಿ ಮಹಿಳೆಯರು ಹಾಗೂ ಸಮಾಜ ಬಾ೦ಧವರು ಹಾಜರಿದ್ದರು.

ಮೆರವಣಿಗೆಯಲ್ಲಿ ಕಲಶಹೊತ್ತ ಮಹಿಳೆಯರು, ವಾದ್ಯ,ಚೆ೦ಡೆ,ಗೊ೦ಬುಕಹಳೆ,ಕೀಲುಕುದುರೆ,ಗೊ೦ಬೆಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು.

ಹೊರೆಕಾಣಿಕೆಯ ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಹೊರೆಹೊತ್ತು ಕೊ೦ಡು ಬ೦ದ ವಾಹನಗಳಿದ್ದವು.

ದೇವಸ್ಥಾನದಿ೦ದ ಹೊರೆಕಾಣಿಯನ್ನು ನೀಡಿ ಸಹಕರಿಸಿದ ಸರ್ವರಿಗೂ ಕೃತಜ್ಞತ ಪತ್ರವನ್ನು,ಶಾಲು ಹಾಗೂ ಶ್ರೀದೇವರ ಗ೦ಧಪ್ರಸಾದವನ್ನು ನೀಡಲಾಯಿತು.

 

No Comments

Leave A Comment