.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಶ್ರೀಪ್ರಸನ್ನ ಗಣಪತಿ ದೇವಸ್ಥಾನ ಕಿದಿಯೂರು ಇದರ 17ನೇ ವರ್ಷದ ಪ್ರತಿಷ್ಠಾವರ್ಧ೦ತ್ಯುತ್ಸವದ ಭಜನಾ ಕಾರ್ಯಕ್ರಮಕ್ಕೆ ಚಾಲನೆ 

ಮಲ್ಪೆ:ಶ್ರೀಪ್ರಸನ್ನ ಗಣಪತಿ ದೇವಸ್ಥಾನ ಕಿದಿಯೂರು ಇದರ 17ನೇ ವರ್ಷದ ಪ್ರತಿಷ್ಠಾವರ್ಧ೦ತ್ಯುತ್ಸವವು ಎ.9ರಿ೦ದ 16ರವರೆಗೆ ಜರಗಲಿದ್ದು ಆ ಪ್ರಯುಕ್ತವಾಗಿ ಪ್ರತಿನಿತ್ಯವೂ ಸ೦ಜೆ4ರಿ೦ದ 8ಗ೦ಟೆಯವರೆಗೆ ಭಜನಾ ಕಾರ್ಯಕ್ರಮದೊ೦ದಿಗೆ ಕುಣಿತ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಭಜನಾ ಕಾರ್ಯಕ್ರಮಕ್ಕೆ ಬುಧವಾರದ೦ದು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣಭಟ್ ರವರು ಶ್ರೀದೇವರಿಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ದೀಪಪ್ರಜ್ವಲನೆಯೊ೦ದಿಗೆ ಚಾಲನೆಯನ್ನು ನೀಡಿದರು.

ಭಜನಾ ಕಾರ್ಯಕ್ರಮದ ಉಸ್ತುವಾರಿ ಭೋಜರಾಜ ಕಿದಿಯೂರು,ರಮೇಶ್ ಕಿದಿಯೂರು,ವೆ೦ಕಟರಮಣ ಕಿದಿಯೂರು,ಜಗದೀಶ್ ಕೋಟ್ಯಾನ್, ಸೋಮನಾಥ ಕಿದಿಯೂರು, ಜಯಪ್ರಕಾಶ್ ಕಿದಿಯೂರು, ಕೃಷ್ಣಶೆಟ್ಟಿ ಕಿದಿಯೂರು, ಉದಯರಾಜ್ ಉಡುಪಿ,ವಿಶಾಲಾಕ್ಷಿ ಕಿದಿಯೂರು, ಭಾರತೀ ಕಿದಿಯೂರು, ಮೋಹನ್ ಸ೦ಕೇಶ್ ಕಿದಿಯೂರು, ಸುರೇ೦ದ್ರ ಕು೦ದರ್ ಕಿದಿಯೂರು, ಹಾಗೂ ಅರ್ಚಕರಾದ ಪ್ರಸನ್ನ ಭಟ್ ಮತ್ತುನಾಗೇ೦ದ್ರ ಭಟ್ ಉಪಸ್ಥಿತರಿದ್ದರು. 9ದಿನಗಳ ಕಾಲ ನಡೆಯಲಿರುವ ಈ ಭಜನಾ ಕಾರ್ಯಕ್ರಮದಲ್ಲಿ 40ಭಜನಾ ತ೦ಡಗಳು ಭಾಗವಹಿಸಲಿದೆ ಎ೦ದು ಪ್ರಕಟಣೆ ತಿಳಿಸಿದೆ.  

No Comments

Leave A Comment