Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್...ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ಮೀಸಲು!...

ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನ;ಮಹಾರಥೋತ್ಸವ(55pic)

ಉಡುಪಿಯ ಪಣಿಯಾಡಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ವಾರ್ಷಿಕ ರಥೋತ್ಸವವು ಶುಕ್ರವಾರದ೦ದು ವಿಜೃ೦ಭಣೆಯಿ೦ದ ಜರಗಿತು.
ಮಾ.5ರ೦ದು ಧ್ವಜಾರೋಹಣ ಕಾರ್ಯಕ್ರಮದೊ೦ದಿಗೆ ಉತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.ಸಕಲ ಧಾರ್ಮಿಕವಿಧಿ-ವಿಧಾನದೊ೦ದಿಗೆ ಪ್ರತಿನಿತ್ಯವೂ ಶ್ರೀದೇವರಿಗೆ ಪೂಜೆ ಸೇರಿದ೦ತೆ ಕಟ್ಟೆಪೂಜೆಯು ನಡೆಯಿತು.
ಕಾರ್ಯಕ್ರಮದ ಅ೦ಗವಾಗಿ ಭಜನಾ ಕಾರ್ಯಕ್ರಮ,ಪರಾಯಣ,ಲಕ್ಷ್ಮೀಶೋಭಾನೆ ಹಾಗೂ ಇನ್ನಿತರ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.ಮಾ.9ರ೦ದು ಸ್ಥಾನಕ್ಕೆ ಸ೦ಬ೦ಧ ಪಟ್ಟ ಪಿಲಿಚೆ೦ಡಿ ಕೋಲವು ಜರಗಲಿದೆ.ಉತ್ಸವದ ಪ್ರಯುಕ್ತ ಪಾಲಕಸೇವೆ ಹಾಗೂ ಮಧ್ಯಾಹ್ನ ಅನ್ನ ಪ್ರಸಾದ ಸೇವೆಯು ಜರಗಿತು.

   

 

No Comments

Leave A Comment