ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆಯ ವಾರ್ಷಿಕೋತ್ಸವ
ಕುಂದಾಪುರ: ಶ್ರೀರಾಮ ಪಟ್ಟಾಭಿಷೇಕೋತ್ಸವದ ಪ್ರಥಮ ವಾರ್ಷಿಕೋತ್ಸವವನ್ನು ಜ.22 ರಂದು ಹಂಗ್ಲೂರು ವೆಂಕಟಲಕ್ಷ್ಮಿ ಸಭಾಗೃಹದ ಆವರಣದಲ್ಲಿ ನಡೆದ ಯಕ್ಷಗಾನ ರಂಗದಲ್ಲಿ ಉತ್ಸವವಾಗಿ ಆಚರಿಸಲಾಯಿತು.
ಹೇಮಾವತಿ, ಚಂದ್ರಶೇಖರ ಐತಾಳರ ಸೇವೆ ಬಯಲಾಟವಾಗಿ ಕಾರುಣ್ಯಾಂಬುಧಿ ಶ್ರೀರಾಮ ಪ್ರಸಂಗದೊಂದಿಗೆ ಶ್ರೀರಾಮ ಪಟ್ಟಾಭಿಷೇಕ ನಡೆಯಿತು. ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ, ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಮೇಳದ ಮೆನೇಜರ್ ರಾದ ಗಿರೀಶ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಅವರ ಸಲಹೆಯಂತೆ ,ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರು ಪ್ರಸಂಗ ಸಂಯೋಜಿಸಿ, ವಿಶೇಷವಾಗಿ ಪಟ್ಟಾಭಿಷೇಕವನ್ನು ಆಚರಿಸಿದರು.
ಶ್ರೀರಾಮನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ,ಸಂಘಟಕ ,ವಿದ್ವಾಂಸರಾದ ಉಜಿರೆ ಅಶೋಕ ಭಟ್ ಅವರು ಶ್ರೀರಾಮಚಂದ್ರನ ಆದರ್ಶ, ರಾಮರಾಜ್ಯ ಕಲ್ಪನೆ, ಸಮಾಜದ ಉದ್ದಾರ, ಮುಂತಾದ ವಿಷಯಗಳನ್ನು ಪ್ರಧಾನವಾಗಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಮೇಳದ ಹಿತೈಷಿಗಳು ಅಭಿಮಾನಿಗಳು ಆದಂತಹ ಶ್ರೀ ದಾಮೋದರ್ ಶರ್ಮ ಬಾರ್ಕೂರು, ಸೇವಾಕರ್ತರಾದ ಶ್ರೀ ಕೃಷ್ಣಮೂರ್ತಿ ನಾವಡ ಕಟ್ಕೆರೆ ಮುಂತಾದವರು ವಿವಿಧ ಪಾತ್ರದಲ್ಲಿ ರಂಗದಲ್ಲಿ ಕಾಣಿಸಿಕೊಂಡರು. ಮೇಳದ ಮೆನೇಜರ್ ಗಿರೀಶ್ ಹೆಗಡೆ ಪುಷ್ಪರಾಜ ಶೆಟ್ಟಿ ವಿಶೇಷವಾಗಿ ಭರತ, ಲಕ್ಷ್ಮಣ ನ ಪಾತ್ರ ನಿರ್ವಹಿಸಿದರು, ಅಲ್ಲದೆ ಮೇಳದ ಹಿರಿಯ, ಕಿರಿಯ ಎಲ್ಲಾ ಕಲಾವಿದರು ,ಸಿಬ್ಬಂದಿಗಳು ಉತ್ಸಾಹದಲ್ಲಿ ಭಾಗಿಯಾದರು.